ಬದುಕಿನ ತಲ್ಲಣಗಳಿಗೆ ಕಾವ್ಯ ಮಿಡಿಯಬೇಕು : ರಾಮೇಶ್ವರ

0
196

ಕಲಬುರಗಿ : ಇಂದಿನ ಸಾಮಾಜಿಕ ಆಗು ಹೋಗುಗಳ ಮೇಲೆ ಹಾಗೂ ಬದುಕಿನ ತಲ್ಲಣಗಳಿಗೆ ಕಾವ್ಯ ಮಿಡಿಯಬೇಕು ಎಂದು ಮಕ್ಕಳ ಹಿರಿಯ ಸಾಹಿತಿ ಏ ಕೆ ರಾಮೇಶ್ವರ ಹೇಳಿದರು.

ನಗರದ ರಿಂಗ್ ರಸ್ತೆಯ ಮಂಥನ ಸಭಾ ಭವನದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಲಲಿತಾ ಕಲಾ ಅಕಾಡೆಮಿಯ ಸದಸ್ಯ ಬಸವರಾಜ ಉಪ್ಪಿನ ಅವರ ೫೦ನೇ ವಿವಾಹ ವಾರ್ಷಿಕೋತ್ಸವದ ನಿಮಿತ್ತ ಆಯೋಜಿಸಿದ ವಿಶೇಷ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಇದನ್ನೂ ಓದಿ: ಆಮೆ ಗತಿಯಲ್ಲಿ ಸಾಗುತ್ತಿರುವ ರಸ್ತೆ ಕಾಮಗಾರಿ: ನಿಲ್ಲದ ವಾಹನ ಸವಾರರ ಪರದಾಟ

ಸಂಕಷ್ಟ ಜೀವನದಲ್ಲಿ ಎದುರಾಗುವ ಸಮಸ್ಯೆ ಮತ್ತು ಸವಾಲುಗಳನ್ನು ಮೆಟ್ಟಿ ನಿಲ್ಲುವ ತಾಕತ್ತು ಕಾವ್ಯದಲ್ಲಿರಬೇಕು. ನಮ್ಮ ಜೀವನ ಪ್ರೀತಿಯನ್ನು ಸವಿ ಜೇನಿನಂತೆ ಸವಿದು ಸಾರ್ಥಕ ಜೀವನ ನಡೆಸುವ ಉಪ್ಪಿನ ದಂಪತಿಗಳು ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಬಣ್ಣಿಸಿದರು.

ಮುಖ್ಯ ಅತಿಥಿ ಕರ್ನಾಟಕ ಕೇಂದ್ರೀಯ ವಿವಿಯ ಪ್ರಾಧ್ಯಾಪಕ ಡಾ. ವಿಕ್ರಮ ವಿಸಾಜಿ ಅವರು, ರಾಷ್ಟ್ರದ ಹೆಸರಾಂತ ಕಲಾವಿದರಾದ ಬಸವರಾಜ ಉಪ್ಪಿನ ಅವರು ಅಪರೂಪದ ವ್ಯಕ್ತಿತ್ವ ಹೊಂದಿದವರು. ನಾಡು ಹೆಮ್ಮೆ ಪಡುವಂತ ಸಾಧಕರಾಗಿದ್ದಾರೆ. ಅವರ ಸಾಧನೆಯ ಮೇರು ವ್ಯಕಿತ್ವವನ್ನು ಕಾವ್ಯದ ಮುಂಚನದಲ್ಲಿ ಕವಿಗಳು ಕಟ್ಟಿ ಕೊಟ್ಟಿರುವುದು ಸ್ತುತ್ಯಾರ್ಹ ಎಂದರು.

ಇದನ್ನೂ ಓದಿ: ಗಾಯಾಳು ಯೋಧನ ಚಿಕಿತ್ಸೆಗೆ ಸರ್ಕಾರ ವೆಚ್ಚ ಭರಿಸಿ: ವಡಗಾಂವ

ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ ಹಿರಿಯ ಸಾಹಿತಿ ಡಾ. ಸ್ವಾಮಿರಾವ ಕುಲಕರ್ಣಿ ಅವರು, ಕವಿ ಮನಸ್ಸುಗಳು ಜನ ಸಾಮಾನ್ಯರ ಬದುಕು ಭವಣೆಗಳ ಮೇಲೆ ಸಾಹಿತ್ಯ ಮೂಲಕ ಬೆಳಕು ಚೆಲ್ಲಬೇಕು ಮತ್ತು ವಾಸ್ತವತೆ ನೆಲೆಯಲ್ಲಿ ಕಟ್ಟಿಕೊಟ್ಟ ಕಾವ್ಯ ಬಹು ಕಾಲ ನಮ್ಮ ಮಧ್ಯೆ ಉಳಿಯಬಹುದಾಗಿದೆ ಎಂದು ಹೇಳಿದರು. ಖ್ಯಾತ ಕಲಾವಿದ ಜೆ ಎಸ್ ಖಂಡೇರಾವ ಮಾತನಾಡಿದರು.

ಬಂಡಾಯ ಸಾಹಿತಿ ಭೀಮಣ್ಣ ಬೋನಾಳ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸುವರ್ಣ ವಾರ್ಷಿಕೋತ್ಸವ ಆಚರಿಸಿಕೊಂಡ ಬಸವರಾಜ ಉಪ್ಪಿನ ಹಾಗೂ ಧರ್ಮಪತ್ನಿ ಮಹಾದೇವಿ ಅವರಿಗೆ ಅಭಿಮಾನಿಗಳು ಸತ್ಕರಿಸಿದರು. ಉಪ್ಪಿನ ಪರಿವಾರದ ಸದಸ್ಯರು ಉಪಸ್ಥಿತರಿದ್ದರು.

ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಶಿಕ್ಷಕರ ಕೊಡುಗೆ ಅಪಾರ: ದೇಶಮುಖ

ಕವಿಗಳಾದ ಡಾ. ವಿಶಾಲಾಕ್ಷೀ ಕರಡ್ಡಿ, ನರಸಿಂಗರಾವ ಹೆಮನೂರ, ಸಿ ಎಸ್ ಮಾಲಿ ಪಾಟೀಲ, ಧರ್ಮಣ್ಣ ಎಚ್ ಧನ್ನಿ, ಡಾ. ರಾಜಶೇಖರ ಮಾಂಗ್, ರೇಣುಕಾ ಡಾಂಗೆ, ನಾರಯಣರಾವ ಕುಲಕರ್ಣಿ, ಡಾ. ಗಿರಿಮಲ್ಲ, ಫರ್ವಿನ ಸುಲ್ತಾನಾ, ಸಾವಿತ್ರಿ ಉಪ್ಪಿನ ಹಾಗೂ ಇತರ ಕವಿಗಳು ಭಾಗವಹಿಸಿದರು. ಶಿಕ್ಷಕಿ ಶಿವಲೀಲಾ ಹೊಟ್ಟೆ ಅವರು ನಿರೂಪಿಸಿ ವಂದಿಸಿದರು.

ಇದನ್ನೂ ಓದಿ: ಉಪಯೋಗಕ್ಕೆ ಬಾರದ ಸಾರ್ವಜನಿಕ ಶೌಚಾಲಯ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here