ರಸ್ತೆ ಅಪಘಾತಕ್ಕಿಡಾಗಿದ ಮಹಿಳೆಗೆ ಚಿಕಿತ್ಸೆ ಕೊಡಿಸಿದ ಸಂಸದ ಜಾಧವ

0
63

ಕಲಬುರಗಿ: ರಸ್ತೆ ಅಪಘಾತಕ್ಕಿಡಾಗಿ ನರಳಾಡುತ್ತಿದ್ದ ಮಹಿಳೆಯನ್ನ ತಮ್ಮ ಸ್ವಂತ ಕಾರಿನಲ್ಲಿ ಆಸ್ಪತ್ರೆ ಕರೆದೊಯ್ದು ಚಿಕಿತ್ಸೆ ಕೊಡಿಸುವ ಮೂಲಕ ಉಮೇಶ ಜಾಧವ್ ಮಾನವೀಯತೆ ತೋರಿದ್ದಾರೆ.

ಇದನ್ನೂ ಓದಿ: ಉರ್ದು ಬರುವ ಶಿಕ್ಷಕರೇ ಉರ್ದು ಶಾಲೆಯ ಮಕ್ಕಳ ಭವಿಷ್ಯ ಬರೆಯಬಹುದು: ಸಿದ್ದವೀರಯ್ಯ

Contact Your\'s Advertisement; 9902492681

ಜಿಲ್ಲೆಯ ಶಹಬಾದ್ ಬಳಿ ಕಾರು ಅಪಘಾತವಾಗಿ ಮಹಿಳೆ ತಲೆಗೆ ಗಂಭೀರ ಗಾಯಗಳಾಗಿ ರಕ್ತಸ್ರಾವದಿಂದ ಮಹಿಳೆ ನರಳಾಡುತ್ತಿದ್ದರು. ಇದೆ ರಸ್ತೆ ಮೂಲಕ ಸಮಾವೇಶದಲ್ಲಿ ಭಾಗಿಯಾಗಲು ಸಂಸದ ಜಾಧವ್ ನಾಲವಾರ ಗ್ರಾಮಕ್ಕೆ ತೆರಳುತ್ತಿದ್ದರು.. ಮಾರ್ಗ ಮದ್ಯೆ ಅಪಘಾತ ದೃಶ್ಯ ಕಂಡು ಕಾರು ನಿಲ್ಲಿಸಿ ಗಾಯಾಳು ಮಹಿಳೆಗೆ ತಮ್ಮ ಕಾರಿನಲ್ಲಿ ಕಲಬುರಗಿ ಕರೆತಂದು ಜೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.

ಇದನ್ನೂ ಓದಿ: ಇಬ್ಬರು ಮನೆಗಳ್ಳರ ಬಂಧನ: 4ಲಕ್ಷ ಮೌಲ್ಯದ ಸ್ವತ್ತು ವಶ

ಸಮಾವೇಶಕ್ಕೆ ತರಳೋದನ್ನ ಅರ್ಧಕ್ಕೆ ಮೊಟಕುಗೊಳಿಸಿ ಮಹಿಳೆಯನ್ನ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಸಂಸದ ಉಮೇಶ್ ಜಾಧವ್ ಕಾರ್ಯಕ್ಕೆ ಸ್ಥಳಿಯರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.. ಸ್ವಯಂ ವೈದ್ಯರಾಗಿರುವ ಸಂಸದ ಜಾಧವ ಈ ಮುಂಚೆಯೂ ಇಂತಹ ಕಾರ್ಯಗಳನ್ನ ಮಾಡುವ ಮೂಲಕ ಮಾನವಿಯತೆ ಮೆರೆದಿದ್ದರು…

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here