ಜೈ ಕನ್ನಡಿಗರ ಸೇನೆ ಆಶ್ರಯ ಮನೆ ನಿರ್ಮಾಣ ಹಕ್ಕು ಪತ್ರ ವಿತರಣೆಗೆ ಆಗ್ರಹ

0
9

ಕಲಬುರಗಿ : ವಾರ್ಡ್ ನಂ.೪೯ರ ಬುದ್ಧನಗರ ಹಾಗೂ ೫೪ರ ತಾರಫೈಲ್ ಬಡಾವಣೆಯ ಸ್ಲಂ ತಾಂಡ ಹನುಮಾನ ನಗರದಲ್ಲಿ ಸ್ಲಮ ಬೋರ್ಡ್ ಯೋಜನೆಯಲ್ಲಿ ಸುಮಾರು ೩೫೦ ಮನೆಗಳು ಮಂಜೂರ ಅಗಿದು ಅದರಲ್ಲಿ ಕೆಲವು ಮನೆಗಳು ಕಚ್ಚ ಪಕ್ಕಾ ಮಾಡಿರುತ್ತಾರೆ ಅವುಗಳನ್ನು ಪೂರ್ಣಗೊಳಿಸಿ ಸಂಪೂರ್ಣ ೫೦೦ ಮನೆಗಳನ್ನು ನಿರ್ಮಾಣ ಮಾಡಲು ತಾವು ಅದೇಶಿಸಬೇಕು ಹಾಗೂ ಮಂಜೂರಾದ ಕುಟುಂಬಗಳಿಗೆ ಹಕ್ಕು ಪತ್ರ ವಿತರಿಸಲು ಸಂಬಂಧಪಟ ಅಧಿಕಾರಿಗಳಿಗೆ ಅದೇಶಿಸಬೇಕೆಂದು ಜೈ ಕನ್ನಡಿಗರ ಸೇನೆ ವತಿಯಿಂದ ನಗರಕ್ಕೆ ಆಗಮಿಸಿದ ಸಚಿವ ವಿ.ಸೋಮಣ್ಣಾ ಅವರಿಗೆ ಮನವಿ ಸಲೀಸಲಾಯಿತು.

ಸೇನೆಯ ರಾಜ್ಯಾಧ್ಯಕ್ಷ ದತ್ತು ಭಾಸಗಿ, ಜಗನ್ನಾಥ ಸೂರ್ಯವಂಶಿ, ರಾಮಾ ಪೂಜಾರಿ, ವಿಠಲ ಪೂಜಾರಿ, ಕವಿರಾಜ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here