ಕಾರಜೋಳಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲು: ಬಸವರಾಜ ಹೊಸ್ಮನಿ ಆಗ್ರಹ

0
94

ಕಲಬುರಗಿ: ಶಾಸಕ ಗೋವಿಂದ ಕಾರಜೋಳ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಮಾದಿಗ ಸಮಾಜದ ಯುವ ಮುಖಂಡ ಬಸವರಾಜ ಹೊಸ್ಮನಿ ಹಂಗರಗಿ ಒತ್ತಾಯಿಸಿದ್ದಾರೆ. ಗೋವಿಂದ ಕಾರಜೋಳ  ಮಾದಿಗ ಸಮುದಾಯದ ಪ್ರಭಾವಿ ನಾಯಕರಾಗಿದ್ದಾರೆ. ಮಾದಿಗ ಸಮುದಾಯಕ್ಕೆ ಇದುವರೆಗೂ ಪ್ರಮುಖ ಸ್ಥಾನ ನೀಡಿಲ್ಲ. ಸಮುದಾಯದ ಅಭಿವೃದ್ಧಿಗಾಗಿ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು. ರಾಜ್ಶದ ಬಹುತೇಕ ಸಂದರ್ಭದಲ್ಲಿ ಸಮುದಾಯ ಮುಖ್ಶಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜೊತೆಗೆ ನಿಂತಿದೆ. ಸಮುದಾಯದ ಅಭಿವ್ರದ್ಧಿ ದ್ರಷ್ಠಿಯಿಂದ ಗೋವಿಂದ ಕಾರಜೋಳ ಅವರಿಗೆ ಉಪಮುಖ್ಶಮಂತ್ರಿ ಕೊಡುವುದು ಅವಶ್ಶವಾಗಿದೆ. ಗೋವಿಂದ ಕಾರಜೋಳ ಅವರಿಗೆ ಉಪಮುಖ್ಶಮಂತ್ರಿ ಮಾಡುವಂತೆ ನೂತನ  ಮುಖ್ಶಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ರಾಷ್ಟ್ರೀಯ ಅಧ್ಯಕ್ಷ ಅಮಿತ ಶಾ ಅವರಿಗೆ ಮನವಿ ಮಾಡಲಾಗುವುದು’ ಎಂದು ಅವರು ಹೇಳಿದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here