ಕಲಬುರಗಿ: ಕಾಳಗಿ ತಾಲೂಕಿನ ಟೆಂಗಳಿ ಗ್ರಾಮ ಪಂಚಾಯತ್ ಸಿಬ್ಬಂದಿಗಳ ದಿನಾಂಕ ೨೮-೨-೨೦೨೨ ರವರೆಗಿನ ಇಲ್ಲಿಯವರೆಗೆ ವೇತನ ನೀಡದೇ ಸತಾಯಿಸುತ್ತಿರುವ ಪಿಡಿಓ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಸಂಘಟನೆ ವತಿಯಿಂದ ಜಿಲ್ಲಾ ಪಂಚಾಯತ್ ಸಿಇಓ ರವರಿಗೆ ಮನವಿ ಪತ್ರ ಸಲ್ಲಿಸಿದರು.
ಈಗಾಗಲೇ ಸದರ ಕಾಳಗಿ ತಾಲೂಕಿನ ಟೆಂಗಳಿ ಗ್ರಾಮ ಪಂಚಾಯತಿನ ಕರ ವಸೂಲಿಗಾರ, ಕಸ ಗೂಡಿಸುವ, ಕ್ಲರ್ಕ್, ಕಂಪ್ಯೂಟರ್ ಆಪರೇಟರ್ ಸೇರಿದಂತೆ ಒಟ್ಟು ೧೪ ಜನ ಸಿಬ್ಬಂದಿಗಳ ರೂ.೫೦,೫೪,೪೭೭/- ವೇತನವನ್ನು ಬಿಡುಗಡೆ ಮಾಡದೇ ಅಲ್ಲಿನ ಪಿಡಿಓ ಸತಾಯಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಈಗಾಗಲೇ ಹಲವು ಬಾರಿ ಪಿಡಿಓ ಅವರಿಗೆ ಹೇಳಿದರು ಏನಾದರೂ ಮಾಡಿಕೊಳ್ಳಿ ಬಜೆಟ್ ಇಲ್ಲ ಎಂದು ಹೇಳುತ್ತಿದ್ದಾರೆ. ಆದರೆ ನಾವು ನಮ್ಮ ಕುಟುಂಬ ಮತ್ತು ಶಾಲಾ ಮಕ್ಕಳ ಶುಲ್ಕ ಹೇಗೆ ಕಟ್ಟಬೇಕು ಎಂದು ಜಿಲ್ಲಾ ಪಂಚಾಯತ್ ಸಿಇಓ ಎದುರು ತಮ್ಮ ಅಳಲು ತೋಡಿಕೊಂಡರು. ಒಂದು ವೇಳೆ ವಾರದಲ್ಲಿ ಕ್ರಮಕೈಗೊಳ್ಳದೇ ಇದ್ದಲ್ಲಿ ಜಿಲ್ಲಾ ಪಂಚಾಯತ ಕಛೇರಿ ಎದುರು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಅವರು ಮನವಿ ಪತ್ರದಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಶರಣು ಹೊಸಮನಿ, ಗ್ರಾಮ ಪಂಚಾಯತ ಸಿಬ್ಬಂದಿಗಳಾದ ವಿಶ್ವರಾದ್ಯ, ಬೀಮರಾಯ, ತಾರಾಚಂದ್ರ, ಚೆನ್ನಮ್ಮ, ರೇವಣಸಿದ್ದ, ರಾಮಚಂದ್ರ,ಈರಶೇಟ್ಟಿ, ನೀಲಮ್ಮ, ಶಿವಕುಮಾರ, ಈರಮ್ಮ, ಮಲ್ಲಮ್ಮ, ಭಾರತಿ,ಪ್ರಕಾಶ ಸೇರಿದಂತೆ ಇನ್ನಿತರರು ಇದ್ದರು.