13ಕ್ಕೆ ಪದಗ್ರಹಣ ಸಿದ್ದರಾಮಯ್ಯ ೭೫ ಅಮೃತ ಮಹೋತ್ಸವದ ಪೂರ್ವಭಾವಿ ಸಭೆ

0
143

ಕಲಬುರಗಿ; ಕರ್ನಾಟಕ ಪ್ರದೇಶ ಕುರುಬರ ಸಂಘ ಜಿಲ್ಲಾ ಶಾಖೆ ಕಲಬುರಗಿ ನೂತನ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಮತ್ತು ನಿರ್ದೇಶಕಗಳ ಸನ್ಮಾನ ಹಾಗೂ ಸಿದ್ದರಾಮಯ್ಯ ೭೫ ಅಮೃತ ಮಹೋತ್ಸವದ ಪೂರ್ವಭಾವಿ ಸಭೆಯನ್ನು ನಗರದ ಕನ್ನಡ ಭವನದಲ್ಲಿ ಜುಲೈ ೧೩ ರಂದು ಬೆಳ್ಳಿಗೆ ೧೦ ಕ್ಕೆ ನಡೆಯಲಿದೆ. ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ  ಕೆ. ಎಂ. ರಾಮಚಂದ್ರಪ್ಪ  ಈ ಕಾರ್ಯಕ್ರಮಕ್ಕೆ ಉದ್ಘಾಟಿಸುವರು. ರಾಜ್ಯ ಕುರುಬರ ಸಂಘದ ಅಧ್ಯಕ್ಷ ಬಿ.ಸುಬ್ರಮಣ್ಯ ಅವರು ಅಧ್ಯಕ್ಷತೆ ವಹಿಸುವರು. ರಾಜ್ಯ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಮೂರ್ತಿ, ಕುರುಬರ ಸಂಘದ ನಿಕಟಪೂರ್ವ ಅಧ್ಯಕ್ಷ ತಿಪ್ಪಣ್ಣಾ ಗುಂಡಗುರ್ತಿ ಬೆಳಬಟ್ಟಿ, ರಾಜ್ಯ ಕುರುಬರ ಸಂಘದ ಹಿರಿಯ ಉಪಾಧ್ಯಕ್ಷ ಈರಣ್ಣಾ ಎಸ್ ಜಳಕಿ ಇವರು ಮುಖ್ಯ ಅತಿಥಿಗಳಾಗಿ ಆಗಮಿಸುವರು.

Contact Your\'s Advertisement; 9902492681

ಇದನ್ನೂ ಓದಿ: ಶಹಾಬಾದ್‌: ತಲ್ವಾರ್‌ನಿಂದ ಇರಿದು ಕಾಂಗ್ರೆಸ್ ಮುಖಂಡನ ಹತ್ಯೆ

ಯುವ ಕುರುಬರ ಸಂಘದ ರಾಜ್ಯ ಅಧ್ಯಕ್ಷ ಭಗವಂತರಾಯ ಗೌಡ ಮಾಲಿಪಾಟೀಲ, ಕುರುಬರ ಸಂಘ ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ನಿರ್ಮಲಾ ಬರಗಾಲಿ, ರಾಜ್ಯ ಕುರುಬರ ಸಂಘದ ರಾಜ್ಯ ನಿರ್ದೇಶಕ ಗಣಪತಿ ಮಿಣಜಗಿ, ರಾಜ್ಯ ಕುರುಬರ ಸಂಘದ  ರಾಜ್ಯ ನಿರ್ದೇಶಕ ಮಲ್ಲಿಕಾರ್ಜುನ ಬಂಕೂರ ಇವರು ಅತಿಥಿಗಳಾಗಿ ಆಗಮಿಸುವರು.

ಈ ಸಮಾರಂಭಕ್ಕೆ ಸಮಾಜದ ಹಿತೈಷಿಗಳು, ಜಿಲ್ಲೆಯ ಎಲ್ಲಾ ನಿರ್ದೇಶಕರು, ಹಾಗೂ ಸಿದ್ದರಾಮಯ್ಯ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕೆಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಗುರುನಾಥ ಎಸ್.ಪೂಜಾರಿ, ಕಾಯಾಧ್ಯಕ್ಷ ಸಾಯಬಣ್ಣ ಸಿ.ಪೂಜಾರಿ, ಪ್ರ.ಕಾರ್ಯದರ್ಶಿ ಮಲ್ಲಿಕಾರ್ಜುನ ಸಿ.ಮುಡಬೂಳ, ಖಜಾಂಚಿ ರವಿಗೊಂಡ ಬಿ.ಕಟ್ಟಿಮನಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here