೧೩ರಂದು ಗುರುವಂದನಾ ಕಾರ್ಯಕ್ರಮ

1
126

ಚಿತ್ತಾಪುರ: ಪಟ್ಟಣದ ಕಡಬೂರ ಬಡಾವಣೆಯ ಸಿದೇಶ್ವರ ಪೆದ್ದು ಮಠದಲ್ಲಿ ಕಡ್ಲಿಗಾರ ಹುಣ್ಣಮೆಯಂದು ಜು.೧೩ ರಂದು ಬುಧವಾರ ಗುರುವಂದನಾ ಕಾರ್ಯಕ್ರಮ ನಡೆಯಲಿದೆ.

ಅಕ್ಕಮಹಾದೇವಿ ಮಹಿಳಾ ಸಂಘದವರು ಹಮ್ಮಿಕೊಳ್ಳುವ ಈ ಕಾರ್ಯಕ್ರಮದಲ್ಲಿ ದಿಗ್ಗಾಂವ ಪಂಚಗೃಹ ಹಿರೇಮಠದ ಶ್ರೀ ಸಿದ್ದವೀರ ಶಿವಾಚಾರ್ಯರರು ಸಾನ್ನಿಧ್ಯದಲ್ಲಿ ಬೆಳಗ್ಗೆ ಶ್ರೀ ಸಿದ್ದೇಶ್ವರ ಕರ್ತೃ ಲಿಂಗಕ್ಕೆ ರುದ್ರಾಭಿಷೇಕ್, ಬಿಲ್ವಾರ್ಚನೆ, ಮಹಾ ಮಂಗಲ ನಂತರ ಸಮಾರಂಭದಲ್ಲಿ ಗುರುಗಳ ಗುರುಪಾದ ಪೂಜೆ, ಗೌರವ ಅರ್ಪಣೆ, ಕಲಾವಿದರಿಗೆ, ಸಾಧಕರಿಗೆ ಗುರುರಕ್ಷೆ ನೀಡಿ ಗೌರವಿಸಲಾಗುವುದು.

Contact Your\'s Advertisement; 9902492681

ಇದನ್ನೂ ಓದಿ: ಶಹಾಬಾದ್‌: ತಲ್ವಾರ್‌ನಿಂದ ಇರಿದು ಕಾಂಗ್ರೆಸ್ ಮುಖಂಡನ ಹತ್ಯೆ

ಪಂಡಿತ ಜಗದೀಶ ಶಾಸ್ತ್ರೀ ಪ್ರವಚನ ಹೇಳುವರು. ಲಿಂ. ಯತಿ ನಾಗಭೂಷಣ ಧಾರ್ಮಿಕ ಪಾಠಶಾಲಾ ಶಿಕ್ಷಕರಿಂದ ಸಂಗೀತ ಕಾರ್ಯಕ್ರಮನಡೆಯಲಿದೆ. ಭಕ್ತರು, ಸಾರ್ವಜನಿಕರು ಭಾಗವಹಿಸಿ ಪುನೀತರಾಗಬೇಕೆಂದು ಎಂದು ಮಠದ ವಕ್ತಾರ ಶರಣು ಉಡಗಿ ಕೋರಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here