ಮನುಷ್ಯ ಬೌದ್ಧಿಕವಾಗಿ ವಿಕಾಸವಾಗಿದ್ದಾನೆಯೇ ಹೊರತು ಮಾನಸಿಕವಾಗಿ ಆಗಿಲ್ಲ

0
69

ಕಲಬುರಗಿ: ಇಂದಿನ ವೈಜ್ಞಾನಿಕ ಯುಗದಲ್ಲಿ ಮನುಷ್ಯ ಬೌದ್ಧಿಕವಾಗಿ ವಿಕಾಸವಾಗಿದ್ದಾನೆಯೇ ಹೊರತು ಮಾನಸಿಕವಾಗಿ ಆಗಿಲ್ಲ. ವಿಜ್ಞಾನದಿಂದ ಅನೇಕ ಪ್ರಯೋಜನಗಳಾಗಿದ್ದರೂ ಸಹ ಮನುಷ್ಯ ಮಾತ್ರ ತನ್ನ ತನದಿಂದ ಹೊರಬಂದಿಲ್ಲ. ಹಾಗಾಗಿ, ಮಾನಸಿಕ ಬದಲಾವಣೆಯಿಂದ ಮಾತ್ರ ಶಾಂತಿ ಮತ್ತು ನೆಮ್ಮದಿಯ ಬದುಕು ಕಾಣಲು ಸಾಧ್ಯವಾಗುತ್ತದೆ ಎಂದು ಡಾ.ಸಿ.ವಿ.ರಾಮನ್ ಪ್ರಶಸ್ತಿ ಪುರಸ್ಕೃತರೂ ಆದ ವಿಜ್ಞಾನಿ ಡಾ.ಎಂ.ಎಸ್.ಜೋಗದ ಅಭಿಪ್ರಾಯಪಟ್ಟರು.

ನಗರದ ಎ.ಕೆ.ಆರ್.ದೇವಿ ವಿಜ್ಞಾನ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ನಡೆದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅತಿಥಿಯಾಗಿ ಆಗಮಿಸಿದ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಉನ್ನತಾಧಿಕಾರಿ ಆನಂದ ಬಂದ್ರಕಳ್ಳಿ ಮಾತನಾಡಿ, ಇಂದಿನ ಸಮಾಜದ ಪ್ರಗತಿಗೆ ಮಾರಕವಾಗಿರುವ ಮೌಢ್ಯ, ಅಂಧಶ್ರದ್ಧೆ, ಅಂಧಾನುಕರಣೆ, ಶೋಷಣೆ ವಿರುದ್ಧ ಇಂದಿನ ಯುವ ಜನತೆ ಧ್ವನಿಯೆತ್ತುವ ಮೂಲಕ ಸಮಾಜದ ಸುಧಾರಣೆಗೆ ಮುಂದಾಗಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

Contact Your\'s Advertisement; 9902492681

ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ, ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದಲ್ಲಿ ಕಾಲ ಕಳೆಯದೆ ತಮ್ಮ ಓದಿನತ್ತ ಗಮನಹರಿಸಬೇಕು. ಜತೆಗೆ ವಿದ್ಯಾರ್ಥಿಗಳು ಸಾಧಿಸುವ ಛಲ ಹೊಂದಿರಬೇಕು. ಸತತವಾದ ಪ್ರಯತ್ನದೊಂದಿಗೆ ನಮ್ಮಲ್ಲಿರುವ ಛಲವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕೆಂದು ಮಾರ್ಮಿಕವಾಗಿ ಹೇಳಿದರು.

ಹೆಚ್.ಕೆ.ಇ. ಸಂಸ್ಥೆಯ ಡಾ.ಮಾಲಕರೆಡ್ಡಿ ಮೆಡಿಕಲ್ ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ.ವಿಜಯಲಕ್ಷ್ಮೀ ಮರಮಕಲ್, ಕಾಲೇಜಿನ ವ್ಯವಸ್ಥಾಪಕ ಎಂ.ವಿ.ಎಸ್.ಸುಬ್ರಹ್ಮಣ್ಯಂ, ಪ್ರಮುಖರಾದ ಪರಮೇಶ್ವರ ಶಟಕಾರ, ಶಿವಾನಂದ ಮಠಪತಿ, ಸಿದ್ಧರಾಮ ಹಂಚನಾಳ, ಶ್ರೀಕಾಂತ ಪಾಟೀಲ ತಿಳಗೂಳ , ಜಗದೀಶ ಮರಪಳ್ಳಿ, ರವೀಂದ್ರಕುಮಾರ ಭಂಟನಳ್ಳಿ, ಪ್ರಭುದೇವ ಯಳವಂತಗಿ, ಎಸ್.ಎಂ.ಪಟ್ಟಣಕರ್ ಇತರರಿದ್ದರು. ಕಾಲೇಜಿನ ಆಡಳಿತಾಧಿಕಾರಿ ವಿದ್ಯಾಸಾಫರ ದೇಶಮುಖ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಉಪನ್ಯಾಸಕರಾದ ಕಿರಣ ಗೋಡಬಾಲೆ, ಡಾ.ಶಿವರಾಜ ಪಾಟೀಲ ಗೋನಾಲ, ರಾಜಶೇಖರ ಕೋರೆ, ಹೀನಾ ತಬಸ್ಸುಮ್, ವಿಕ್ರಮ ಬಾದ್ರಿ, ಸೌಮ್ಯ ನಟರಾಜ್ ಬಿ. ಇತರರಿದ್ದರು. ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದಲ್ಲಿ ರಸಾಯನ ಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾಗಿ ನೇಮಕಗೊಂಡ ಡಾ.ಅರುಣಕುಮಾರ ಲಗಶೆಟ್ಟಿ ಅವರನ್ನು ಇದೇ ಸಂದರ್ಭದಲ್ಲಿ ವಿಶೇಷವಾಗಿ ಗೌರವಿಸಲಾಯಿತು.

ನಂತರ ಕಾಲೇಜಿನ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here