ಮಹರ್ಷಿ ಭಗೀರಥ ಯಾತ್ರಾ ನಿವಾಸ ನಿರ್ಮಾಣಕ್ಕೆ ಶಾಸಕ ರಾಜುಗೌಡ ಅಡಿಗಲ್ಲು

0
16

ಸುರಪುರ: ಶ್ರೀ ಮಹರ್ಷಿ ಭಗೀರಥ ಉಪ್ಪಾರ ಸಮಾಜ ಸಂಘ ಸುರಪುರ ವತಿಯಿಂದ ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಶ್ರೀ ಮಹರ್ಷಿ ಭಗೀರಥರ ಜಯಂತ್ಯೋತ್ಸವ ಹಾಗೂ ಮಹರ್ಷಿ ಭಗೀರಥ ಯಾತ್ರಾ ನಿವಾಸ ಕಾಮಗಾರಿಗೆ ಅಡಿಗಲ್ಲು ಸಮಾರಂಭ ನಡೆಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ರಾಜುಗೌಡ ಮಾತನಾಡಿ,ಹಿಂದೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ ತಮ್ಮೆಲ್ಲರಿಗೆ ಮಾತು ಕೊಟ್ಟಂತೆ ಇಂದು ೨೫ ಲಕ್ಷ ರೂಪಾಯಿಗಳ ಅನುದಾನದಲ್ಲಿ ಯಾತ್ರಾ ನಿವಾಸ ನಿರ್ಮಾಣ ಮಾಡಲಾಗುತ್ತಿದ್ದು ಇನ್ನು ಕೆಲವೇ ತಿಂಗಳುಗಳಲ್ಲಿ ಕಾಮಗಾರಿ ಮುಗಿಸಲು ಪ್ರಯತ್ನ ಮಾಡಲಾಗುವುದು ಎಂದರು.ಸಮಾಜದ ಅಭಿವೃಧ್ಧಿಗೆ ಬೇಕಾದ ನೆರವು ನೀಡಲು ಸಿದ್ಧ,ತಾವು ನಿವೇಶನ ನೀಡುವುದಾದರೆ ಶಿಕ್ಷಣ ಸಂಸ್ಥೆಯನ್ನು ನೀಡುವೆನು ಅಲ್ಲದೆ ಈಗಾಗಲೇ ಉಪ್ಪಾರ ಸಮಾಜಕ್ಕೆ ನಿರಂತರವಾಗಿ ರಾಜಕೀಯ ಪ್ರಾತಿನಿಧ್ಯ ನೀಡಲಾಗುತ್ತಿದೆ ಕ್ಷೇತ್ರದಲ್ಲಿನ ಉಪ್ಪಾರ ಸಮಾಜದ ಏಳಿಗೆಗೆ ಸದಾಕಾಲ ನಿಮ್ಮ ಜೊತೆಗಿರುವುದಾಗಿ ಭರವಸೆ ನೀಡಿದರು.

Contact Your\'s Advertisement; 9902492681

ಕಾರ್ಯಕ್ರಮದ ಸಾನಿಧ್ಯವಹಿಸಿದ್ದ ಡಾ:ಪುರುಷೋತ್ತಮಾನಂದಪುರಿ ಸ್ವಾಮೀಜಿ ಮಾತನಾಡಿ,ರಾಜ್ಯದಲ್ಲಿನ ಉಪ್ಪಾರ ಸಮಾಜದ ಏಳಿಗೆಗೆ ಸರಕಾರ ಆದ್ಯತೆ ನೀಡಬೇಕು,ಇಂದು ಶಾಸಕ ರಾಜುಗೌಡ ಅವರು ನಮ್ಮೊಂದಿಗೆ ಭಾಗವಹಿಸುವ ಜೊತೆಗೆ ಯಾತ್ರಿ ನಿವಾಸ ನಿರ್ಮಾಣಕ್ಕೆ ಅಡಿಗಲ್ಲು ನೆರವೇರಿಸಿರುವುದು ಸಂತೋಷದ ಸಂಗತಿಯಾಗಿದೆ ಇದೇರೀತಿ ತಮ್ಮ ಸಹಕಾರ ಸಮಾಜಕ್ಕೆ ನಿರಂತರವಾಗಿರಲಿ ಎಂದರು.

ಇದೇ ಸಂದರ್ಭದಲ್ಲಿ ಅನೇಕ ಮುಖಂಡರು ಮಾತನಾಡಿದರು.ಇದಕ್ಕೂ ಮುನ್ನ ನಗರದ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನ ಆವರಣದಿಂದ ಶ್ರೀ ಮಹರ್ಷಿ ಭಗೀರಥರ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು.ಮೆರವಣಿಗೆಗೆ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಚಾಲನೆ ನೀಡಿದರು.

ಶ್ರೀ ಮಹರ್ಷಿ ಭಗೀರಥರ ಭಾವಚಿತ್ರಕ್ಕೆ ರಾಜಾ ಲಕ್ಷ್ಮೀನಾರಾಯಣ ನಾಯಕ ಪುಷ್ಪಾರ್ಚನೆ ಮಾಡಿದರು.ಕಾರ್ಯಕ್ರಮದ ವೇದಿಕೆ ಮೇಲೆ ಮಾಜಿ ಜಿ.ಪಂ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ (ತಾತಾ),ಮುಖಂಡರಾದ ರಾಜಾ ಮುಕುಂದ ನಾಯಕ,ನಗರಸಭೆ ಸದಸ್ಯ ವೇಣುಮಾಧವ ನಾಯಕ,ಭಗೀರಥ ಸಮಾಜದ ತಾಲೂಕು ಅಧ್ಯಕ್ಷ ಭೀಮಣ್ಣ ಕಟ್ಟಿಮನಿ ಅಧ್ಯಕ್ಷತೆ ವಹಿಸಿದ್ದರು.

ನಗರಸಭೆ ಉಪಾಧ್ಯಕ್ಷ ಮಹೇಶ ಪಾಟೀಲ್,ಎಸ್.ಹೆಚ್.ಅಮ್ಮಾಪುರ,ಮೇಲಪ್ಪ ಗುಳಗಿ,ಬಿ.ಎನ್ ಪೊಲೀಸ್ ಪಾಟೀಲ್ ಬೂದಿಹಾಳ,ಡಾ:ಮುಕುಂದ ಯಾನಗುಂಟಿ,ಗೋವಿಂದರಾಜ ಶಹಾಪುರಕರ್,ಜೀವನಕುಮಾರ ಕಟ್ಟಿಮನಿ,ಪ್ರಕಾಶ ಸಜ್ಜನ್,ಗೋಪಣ್ಣ ದೊಡ್ಮನಿ,ಮಲ್ಲು ದಂಡಿನ್,ವೆಂಕನಗೌಡ ಹೆಬ್ಬಾಳ ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here