ವಿದ್ಯಾರ್ಥಿಗಳಿಗೆ ಸಭ್ಯತೆ, ಸಂಸ್ಕೃತಿ ಕಲಿಸುವಿಕೆ ಅವಶ್ಯ: ಶಿವುಕುಮಾರ್ ಸ್ವಾಮೀಜಿ

0
54

ಸೇಡಂ: ಇತ್ತೀಚಿನ ಬಹುತೇಕ ವಿದ್ಯಾರ್ಥಿಗಳಿಗೆ ಶಿಕ್ಷಣ ಜೊತೆಗೆ ಸಭ್ಯತೆ ಹಾಗೂ ನಮ್ಮ ಸಂಸ್ಕೃತಿಯನ್ನು ಕಲಿಸುವುದು ಅವಶ್ಯವಾಗಿದೆ ಎಂದು ಬೀದರ್‌ನ ಚಿದಂಬರಂ ಆಶ್ರಮದ ಶ್ರೀ ಸದ್ಗುರು ಶಿವುಕುಮಾರ್ ಸ್ವಾಮೀಜಿ ಹೇಳಿದರು.

ಪಟ್ಟಣದ ನೃಪತುಂಗ ಪದವಿ ಮಹಾವಿದ್ಯಾಲಯ ಆವರಣದಲ್ಲಿ ಶ್ರೀ ಕೊತ್ತಲ ಬಸವೇಶ್ವರ್ ಶಿಕ್ಷಣ ಸಮಿತಿ ಮತ್ತು ವಿಕಾಸ ಅಕ್ಯಾಡೆಮಿ ವತಿಯಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ ಕಲ್ಯಾಣ ಕರ್ನಾಟಕ ಸಮಗ್ರ ಶೈಕ್ಷಣಿಕ ಚಿಂತನಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜೀವನದಲ್ಲಿ ಸಂಸ್ಕೃತಿ ಇಲ್ಲದ ಸಭ್ಯತೆ ಜೀವವಿಲ್ಲದ ಶರೀರ ಅಥವಾ ಮೃತದೇಹವಿದ್ದಂತೆ, ಇದನ್ನು ಅರಿಯದ ಇಂದಿನ ಮಕ್ಕಳು ಆಧುನಿಕ ಜೀವನಶೈಲಿಯನ್ನು ಆಳವಡಿಸಿಕೊಳ್ಳುವುದರ ಮೂಲಕ ನಮ್ಮ ದೇಶದ ಪರಂಪರೆ, ಸಂಸ್ಕೃತಿಯನ್ನು ಮರೆತು ಹೋಗುತ್ತಿದ್ದಾರೆ. ಆದ್ದರಿಂದ ಶಾಲಾ ಕಾಲೇಜುಗಳಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳಿಗೆ ವಿದ್ಯಾರ್ಜನೆಯ ಜತೆಗೆ ಸಭ್ಯತೆ, ಸಂಸ್ಕೃತಿಯನ್ನು ದಾರೆ ಎರೆಯಬೇಕು ಎಂದರು.

Contact Your\'s Advertisement; 9902492681

ಶ್ರೀ ಕೊತ್ತಲ ಬಸವೇಶ್ವರ್ ಭಾರತೀಯ ಶಿಕ್ಷಣ ಸಮಿತಿಯ ಅಧ್ಯಕ್ಷರಾದ ಪೂಜ್ಯ ಸದಾಶಿವ್ ಸ್ವಾಮಿಗಳು ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಕಳಕಳಿ ಬೆಳೆಸುವುದು ಅವಶ್ಯವಾಗಿದ್ದು, ಶಿಕ್ಷಣ ಸಂಸ್ಥೆಗಳು, ಸಂಘಸಂಸ್ಥೆಗಳು, ದಾರ್ಮಿಕ ಮುಖಂಡರು ಇದಕ್ಕೆ ಪೂರಕವಾಗಿ ಶ್ರಮಿಸಬೇಕಾಗಿದೆ ಎಂದರು.

ವೇದಿಕೆ ಮೇಲೆ ಶಿವಲಿಂಗೇಶ್ವರ್ ಸ್ವಾಮೀಜಿ, ಶಂಕರಾನಂದ್ ಸ್ವಾಮೀಜಿ, ವಿಜಯಪುರದ ಚಾಣಕ್ಯ ಕರಿಯರ್ ಅಕ್ಯಾಡೆಮಿಯ ಮುಖ್ಯಸ್ಥ ಎನ್.ಎಂ. ಬಿರಾದಾರ್, ವಿಕಾಸ ಅಕ್ಯಾಡೆಮಿ ಮುಖ್ಯಸ್ಥ ಡಾ. ಬಸವರಾಜ್ ಪಾಟೀಲ್ ಸೇಡಮ್, ಸಂಪನ್ಮೂಲ ವ್ಯಕ್ತಿಗಳಾದ ಖ್ಯಾತ ಉಪನ್ಯಾಸಕಿ ಲೀಲಾ ಕಾರಟಗಿ, ಸಿ.ಆರ್. ಆನಂದ್, ಮುಕುಂದ್ ಮೈಗೂರು, ಸುರೇಶ್ ಕುಲಕರ್ಣಿ, ಯು. ಭೀಮರಾವ್, ನರೇಂದ್ರ ಬಡಶೇಷಿ, ವಿವೇಕಾನಂದ್, ಸಯಿದಾ, ಕನಕವಲ್ಲಿ, ಡಾ. ಹೇಮಲತಾ ಅವರು ಉಪಸ್ಥಿತರಿದ್ದರು. ಅನುರಾಧಾ ಪಾಟೀಲ್ ಅವರು ಸ್ವಾಗತಿಸಿದರು. ಶಿಕ್ಷಣ ಸಮಿತಿಯ ಆಡಳಿತಾಧಿಕಾರಿ ಶಿವಯ್ಯ ಮಠಪತಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಜಗದೀಶ್ ಕಡಬಗಾಂವ್ ಅವರು ಕಾರ್ಯಕ್ರಮ ನಿರೂಪಿಸಿದರು. ಬಸವರಾಜ್ ಮಾಲಿಪಾಟೀಲ್ ಅವರು ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here