ಆಕ್ರಮ ಆಸ್ತಿ ವರ್ಗಾವಣೆ ಆರೋಪ: ತಹಶೀಲ್ ಸಿಬ್ಬಂದಿ ಸೇರಿ ಐವರ ವಿರುದ್ಧ ದೂರು ದಾಖಲು

0
136

ಕಲಬುರಗಿ: ನಕಲಿ ಸೇಲ್ ಡೀಡ್ ಆಧರಿಸಿ ಆಸ್ತಿ ವರ್ಗವಾಣೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ನಗರದ ಬ್ರಹ್ಮಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೂವರು ತಹಶೀಲ್ ಕಾರ್ಯಾಲಯದ ಸಿಬ್ಬಂದಿ ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಾಗಿದೆ.

ಸರ್ವೆ ನಂ 5ರ ಕೃಷಿ ಜಮೀನಿನ ಆಶಾ ವೆಂಕಟೇಶ್ ಅವರ ಹೆಸರನ್ನು ಒಡೆದು ಹಾಕಿ 2005 ವರ್ಷದಲ್ಲಿ ನಕಲಿ ಸೇಲ್ ಡೀಡ್ ಮಾಡಲಾಗಿದ ದಾಖಲಿಗಳಿಗೆ ತಹಶೀಲ್ ಸಿಬ್ಬಂದಿಗಳು 2012 ವರ್ಷದಲ್ಲಿ ಸರೋಜನಿ ಮತ್ತು ಅವರ ದಿವಂಗತ ಪತಿ ತಿಮ್ಮಪ್ಪ ಅವರ ಹೆಸರಿಗೆ ಆಸ್ತಿಯನ್ನು ವರ್ಗಾವಣೆ ಮಾಡಲಾಗಿದೆ ಎಂದು ಆಶಾ ವೆಂಕಟೇಶ್ ದೂರಿನಲ್ಲಿ ತಿಳಿಸಿದ್ದಾರೆ.

Contact Your\'s Advertisement; 9902492681

ತಹಶೀಲ್ ಸಿಬ್ಬಂದಿ ಶೀರಾಸ್ತುದಾರರಾದ ದೇವೆಂದ್ರ ನಾಡಿಗೇರ್, ಕಂದಾಯ ನಿರೀಕ್ಷಕ ರಾಜಶೇಖರ್ ಭಂಡೆ, ಕಂಪ್ಯೂಟರ್ ಕ್ಲರ್ಕ್ ರಾಹುಲ್, ಸರೋಜನಿ ತಿಮ್ಮಪ್ಪ ಮತ್ತು ಮಹೇಶ್ ಗುಂಡಪ್ಪ ಅವರ ವಿರುದ್ಧ ಮೊಸ, ವಂಚನೆ ಹಾಗೂ ನಂಬಿಕೆ ದ್ರೋಹ ವೇಸಗಿರುವ ಬಗ್ಗೆ 14 ರಂದು ದೂರು ದಾಖಲಿಸಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here