12ರಿಂದ ಕಡಕೋಳ ಶ್ರೀಗಳ ಪಾದಯಾತ್ರೆ

0
39

ಯಡ್ರಾಮಿ: ತಾಲೂಕಿನ ಸುಕ್ಷೇತ್ರ ಶ್ರೀ ಕಡಕೋಳ ಮಡಿವಾಳೇಶ್ವರ ಮಹಾಮಠದ ಪೀಠಾಧಿಪತಿ ಶ್ರೀ ಷ.ಬ್ರ.ಡಾ. ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳವರ ಘನ ಅಧ್ಯಕ್ಷತೆಯಲ್ಲಿ ಕಡಕೋಳದಿಂದ ಅಫಜಲಪುರ ತಾಲೂಕಿನ ಸುಕ್ಷೇತ್ರ ಚಿಣಮಗೇರಿ ಶ್ರೀ ಮಹಾಂತೇಶ್ವರ ಮಠ(ಗುಡ್ಡಕ್ಕೆ) ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ.

ಆ. 12ರಂದು ಶುಕ್ರವಾರ ಬೆಳಗ್ಗೆ 10:30ಗಂಟೆಗೆ ಆರಂಭವಾಗಿ ನಾನಾ ಗ್ರಾಮಗಳ ಮೂಲಕ ಆ.15 ರಂದು ಸೋಮವಾರ ಸಂಜೆ ಚಿಣಮಗೇರಿ ಶ್ರೀ ಮಹಾಂತೇಶ್ವರ ಮಠ(ಗುಡ್ಡಕ್ಕೆ) ತಲುಪಿ ಪಾದಯಾತ್ರೆ ಮುಕ್ತವಾಗಲಿದೆ. ಭಕ್ತರು ಈ ಪಾದಯಾತ್ರೆಯಲ್ಲಿ ಪಾಲ್ಗೊಂಡು ಭಕ್ತಿ ಸಮರ್ಪಿಸಬೇಕು . ಪಾದಯಾತ್ರೆ ಹೋಗುವ ಮಾರ್ಗದ ನಾನಾ ಹಳ್ಳಿಗಳಲ್ಲಿ ಪ್ರಸಾದ ಹಾಗೂ ವಾಸ್ತವ್ಯದ ವ್ಯವಸ್ಥೆ ಸಹ ಮಾಡಲಾಗಿದೆ ಎಂದು ತಿಳಿಸಲಾಗಿದೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here