ಡಿಜೆ ಬಳಸಿದರೆ ಕಠಿಣ ಕ್ರಮ

0
67

ಶಹಾಬಾದ:ತಾಲೂಕಿನಲ್ಲಿ ಗಣೇಶ ಹಬ್ಬದ ನಿಮಿತ್ತ ಡಿಜೆ ಸೌಂಡ್ ಬಳಸುವಂತಿಲ್ಲ ಎಂದು ನಗರ ಪೊಲೀಸ್ ಠಾಣೆಯ ಪಿಐ ರಾಘವೇಂದ್ರ ತಿಳಿಸಿದ್ದಾರೆ.

ಎಡಿಜಿಪಿ ಅಲೋಕಕುಮಾರ ಹಾಗೂ ಎಸ್‌ಪಿ ಇಶಾಪಂತ್ ಅವರ ಆದೇಶದ ಮೇರೆ ಗಣೇಶ ಹಬ್ಬದ ನಿಮಿತ್ತ ಯಾವುದೇ ಕಾರಣಕ್ಕೂ ಡಿಜೆ ಸೌಂಡ್ ಬಳಸುವಂತಿಲ್ಲ. ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. ಡಿಜೆಯಿಂದ ಸಾರ್ವಜನಿಕರಿಗೆ ಮಾನಸಿಕವಾಗಿ ತೊಂದರೆಯಾಗುವುದಲ್ಲದೇ ಶಾಂತಿ ಕದಡುತ್ತದೆ. ಒಂದು ವೇಳೆ  ಬಳಸಿದ್ದು ಕಂಡು ಬಂದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here