ಮಧು ಪತ್ತಾರ್ ಸಾವಿನ ಪ್ರಕರಣ ಸಿನಿಮಾ ನಿರ್ಮಾಣಕ್ಕೆ ಬ್ರೇಕ್ : ರಾಯಚೂರು ಎಸ್ಪಿಗೆ ದೂರು

0
69

ಶಹಾಪುರ: ಕೆಲವು ತಿಂಗಳುಗಳ ಹಿಂದೆ ಸಂಶಯಾಸ್ಪದವಾಗಿ ಸಾವಿಗೀಡಾದ ರಾಯಚೂರು ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ ಅವರ ಕುರಿತು ಸಿನಿಮಾ ಮಾಡುವುದನ್ನು ನಿಲ್ಲಿಸುವಂತೆ ಮಧು ಪತ್ತಾರ ಅವರ ತಂದೆ ನಾಗರಾಜ ಪತ್ತಾರ್ ರಾಯಚೂರು ಜಿಲ್ಲಾ ಎಸ್ಪಿಗೆ ದೂರನ್ನು ಕೊಟ್ಟಿದ್ದಾರೆ.

ಮಧು ಪತ್ತಾರ ಸಂಶಯಾಸ್ಪದ ಸಾವಿನ ಪ್ರಕರಣ ಸಿಐಡಿ ತನಿಖೆ ಮುಗಿದಿದ್ದು ರಾಯಚೂರು ಜಿಲ್ಲಾ ನ್ಯಾಯಾಲಯದ ವಿಚಾರಣೆಯಲಿದೆ ಈಗಾಗಲೇ ಸಂಬಂಧಪಟ್ಟ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಮಧು ಪತ್ತಾರ ಸಾವಿನ ಪ್ರಕರಣ ಕುರಿತು ರಾಜ್ಯ ಮತ್ತು ಅಂತಾರಾಷ್ಟ್ರ ಮಟ್ಟದಲ್ಲಿ ಹೋರಾಟ ಮಾಡಿ ಪ್ರಗತಿಪರ ಚಿಂತಕರಿಂದ ಕೆಲವು ಚರ್ಚೆಗಳು ಕೂಡ ನಡೆದಿವೆ.

Contact Your\'s Advertisement; 9902492681

ಮಧು ಸಾವಿನ ನೋವಿನಿಂದ ಇನ್ನೂ ನಾವು ಹೊರಬಂದಿಲ್ಲ ಅದಕ್ಕಿಂತಲೂ ಮುಂಚೆ ರಾಯಚೂರು ಯುವಕರು ಮಧು ಪತ್ತಾರ ಸಾವಿನ ಕುರಿತು ಸಿನಿಮಾ ಚಿತ್ರೀಕರಣ ಮಾಡುತ್ತಿರುವುದು ನಮಗೆ ತುಂಬಾ ಬೇಸರವಾಗಿದೆ ಎಂದು ಅವರ ಹೆತ್ತವರು ಎಸ್ಪಿಗೆ ದೂರನ್ನು ನೀಡಿ ವಿನಂತಿಸಿಕೊಂಡಿದ್ದಾರೆ.

ನ್ಯಾಯಾಲಯಲಿರುವ ಪ್ರಕರಣ ತಿರುವು ಪಡೆಯುವುದರಿಂದ ಯಾವುದೇ ರೀತಿಯ ಸಿನಿಮಾ ನಿರ್ಮಾಣಕ್ಕೆ ಅನುಮತಿ ನೀಡದೆ, ತಡೆಯೊಡ್ಡಬೇಕೆಂದು ರಾಯಚೂರು ಜಿಲ್ಲಾ ಎಸ್ಪಿಗೆ ದೂರು ಸಲ್ಲಿಸಲಾಗಿದೆ ಎಂದು ವಿಶ್ವಕರ್ಮ ಸಮಾಜದ ಮುಖಂಡ ಮಾರುತಿ ಬಡಿಗೇರ್ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ಮುಖಂಡರಾದ ಈಶ್ವರ್ ಎ. ಮಿಲಿಟರಿ ಮಲ್ಲೇಶಿ ಹಾಗೂ ಮಧು ಪತ್ತಾರ ತಂದೆ ನಾಗರಾಜ್ ಪತ್ತಾರ್ ಹಾಗೂ ಅವರ ಕುಟುಂಬದ ಎಲ್ಲ ಸದಸ್ಯರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here