ಏಕತೆಯರೂಪದಲ್ಲಿ ದೇಶ ಅಭಿವೃದ್ಧಿಗೊಳ್ಳಲಿ

0
8
  • ಭಾರತದರಾಷ್ಟ್ರೀಯತೆ ಮತ್ತುರಾಷ್ಟ್ರೀಯಐಕ್ಯತೆ: ಸಮಸ್ಯೆ ಸಮಾವಾಲುಗಳು ಕುರಿತಎರಡು ದಿನಗಳ ರಾಜ್ಯಮಟ್ಟದ ಸಮ್ಮೇಳನಕ್ಕೆ ಚಾಲನೆ

ಕಲಬುರಗಿ: ಅನೇಕ ಜಾತಿ, ಧರ್ಮ, ಭಾಷಾ ವೈವಿಧ್ಯತೆಯಿಂದಕೂಡಿದ ಭಾರತವನ್ನುಏಕತೆಯರೂಪದಲ್ಲಿ ಅಭಿವೃದ್ಧಿಗೊಳ್ಳಬೇಕು. ಆ ಶಕ್ತಿ ಭಾರತಕ್ಕೆ ಮಾತ್ರಇದೆಎಂದುಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಕುಲಪತಿ ಶಾಂತಿಶ್ರೀ ಪಂಡಿತ್ ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದಡಾ. ಬಿ. ಆರ್‌ಅಂಬೇಡ್ಕರ್ ಭವನದಲ್ಲಿರಾಜ್ಯಶಾಸ್ತ್ರಅಧ್ಯಯನ ಮತ್ತು ಸಂಶೋಧನಾ ವಿಭಾಗ, ಕರ್ನಾಟಕ ರಾಜ್ಯ ರಾಜ್ಯ ಶಾಸ್ತ್ರ ಅಧ್ಯಾಪಕರ ಸಂಘ ಹಾಗೂ ಸುರುಪುರಿನ ಹೈ.ಕ ಶಿಕ್ಷಣ ಸಂಸ್ಥೆಯಎಸ್.ಪಿ ಮತ್ತುಜೆ.ಎಂ ಬೊಹರಾ ಪದವಿ ಮಹಾವಿದ್ಯಾಲಯ ಇವರುಗಳ ಸಂಯುಕ್ತಾಶ್ರಯದಲ್ಲಿ ಭಾರತದರಾಷ್ಟ್ರೀಯತೆ ಮತ್ತುರಾಷ್ಟ್ರೀಯಐಕ್ಯತೆ: ಸಮಸ್ಯೆಗಳು ಮತ್ತು ಸವಾಲುಗಳು ಕುರಿತು ನಡೆದಎರಡು ದಿನಗಳ ರಾಜ್ಯಮಟ್ಟದ ೧೯ನೇ ರಾಜ್ಯಶಾಸ್ತ್ರಅಧ್ಯಾಪಕರ ಸಮ್ಮೇಳನದಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿ ಮಾತನಾಡಿದಅವರು, ಜಾತಿ ಪದ್ಧತಿ ನಿರ್ಮೂಲನೆ ಮತ್ತು ಸತ್ರೀಯರಿಗೆ ಶಿಕ್ಷಣ ಒದಗಿಸುವಕಾರ್ಯಇನ್ನೂಆಗಬೇಕಿದೆಎಂದು ವಿವಬರಿಸಿದರು.

ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಲಬುರಗಿಗ್ರಾಮೀಣಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು, ದೇಶದಅಭಿವೃದ್ಧಿಗೆರಾಷ್ಟ್ರೀಯತೆ ಬಹಳ ಮಖ್ಯವಾಗಿದ್ದು, ಯಾರೇ ಆಗಲಿ ರಾಷ್ಟ್ರೀಯತೆ ಮತ್ತುಅಭಿವೃದ್ಧಿಯಲ್ಲಿರಾಜಕಾರಣ ಮಾಡಬಾಋದುಎಂದು ತಿಳಿಸಿದರು.

Contact Your\'s Advertisement; 9902492681

ಅಧ್ಯಕ್ಷತೆ ವಹಿಸಿದ್ದ ಗುಲಬರ್ಗಾ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ. ದಯಾನಂದಅಗಸರ ಮಾತನಾಡಿ, ನ್ಯಾಖ್ ೩ನೇ ಶ್ರೇಣಿಯಆವೃತ್ತಿಯಲ್ಲಿ ವಿವಿಗೆ ಈಗಾಗಲೇ ಬಿ ಪ್ಲಸ್ ಸ್ತಾನವಿದ್ದು, ಎ ಪ್ಲಸ್ ಗಾಗಿ ಇಲ್ಲಿರುವ ಕಟ್ಟಡಗಳಿಗೆ ಸುಣ್ಣ ಬಣ್ಣ ಮತ್ತು ಸೌಂದರ್ಯೀಕರಣಕ್ಕೆ ಶಾಸಕರಅನುಧಾನದಲ್ಲಿ ವಿಶೇಷ ಪ್ಯಾಕೇಜ್ ನೀಡಬೇಕುಎಂದು ಮನವಿ ಮಾಡಿದರು.

“ಕರ್ನಾಟಕಜರ್ನಲ್‌ಆಫ್ ಪಾಲಿಟಿಕ್ಸ್” ಜರ್ನಲ್‌ಅನ್ನುಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಿದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಜಿ. ಶ್ರೀರಾಮಲು ಅವರು ಪ್ರಸ್ತಾವಿಕ ನುಡಿಗಳ್ನಾಡಿದರು. ಸಂಸ್ಥಾಪಕ ಕಾರ್ಯದರ್ಶಿ ಡಾ.ಜಯಪ್ರಕಾಶ್ ಮಾವಿನಕುಳ್ಳಿ, ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಪ್ರೊ. ಚಂದ್ರಕಾಂತ ಎಂ. ಯಾತನೂರ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಗುಲಬರ್ಗಾ ವಿವಿ ಸಿಂಡಿಕೆಟ್ ಸದಸ್ಯಗಂಗಾಧರ ನಾಯಕ, ವಿದ್ಯಾ ವಿಷಯಕ ಪರಿಷತ್ ಸದಸ್ಯ ಬಾಬಣ್ಣ ಹೊಸಮನಿ, ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ವ್ಹಿ.ಟಿ ಕಾಂಬಳೆ, ಕರ್ನಾಟಕರಾಜ್ಯರಾಜ್ಯಶಾಸ್ತ್ರಅಧ್ಯಾಪಕರ ಸಂಘದ ಸಂಸ್ಥಾಪಕ ಅಧ್ಯಕ ಪ್ರೊ.ಆರ್.ಎಲ್.ಎಂ ಪಾಟೀಲ್, ಅಧ್ಯಕ್ಷ ಡಾ.ಎಸ್.ಎಚ್.ಹೊಸಮನಿ, ಕಾರ್ಯದರ್ಶಿ ಡಾ.ಪಿ.ಎಸ್‌ಕೊಕಟನೂರ, ಖಂಜಾಚಿ ಪ್ರೊ.ವೆಂಕಟೆಶ್ ನೀರಡಗಿ ಸೇರಿದಂತೆರಾಜ್ಯದ ವಿವಿಧ ವಿವಿಯಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತಿರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here