ಕಲಬುರಗಿ; ನಗರದ ಚೌಡೇಶ್ವರ ಕಾಲೋನಿಯಲ್ಲಿರುವ ಮಾತಾ ಮಾಣಿಕೇಶ್ವರಿ ದೇವಸ್ಥಾನದ ಶ್ರಾವಣ ಮಾಸದ ನಿಮಿತ್ಯ ಅಮ್ಮನವರ ಪಲ್ಲಕ್ಕಿ ಉತ್ಸವಕ್ಕೆ ಸಮಾಜದ ಹಿರಿಯ ಮುಖಂಡ, ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ಕೆ.ಪಿ.ಸಿ.ಸಿ ರಾಜ್ಯ ಉಪಾಧ್ಯಕ್ಷ ತಿಪ್ಪಣ್ಣಪ್ಪ ಕಮಕನೂರ ಚಾಲನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯೆ ಅನುಪಮಾ ಕಮಕನೂರ, ಬಡಾವಣೆಯ ಮುಖಂಡರಾದ ಶರಣಪ್ಪ ಹೊಸೂರ, ಶಾಮರಾವ ಸುಲ್ತಾನಪೂರ, ಜಗನ್ನಾಥ ಹಿರೋಳ್ಳಿ, ಅರ್ಜುನ ಜಮಾದಾರ, ಪ್ರಕಾಶ ಕಮಕನೂರ, ಸಂಗನಾಥ ಕಣ್ಣಿ, ರಾಜು ಸೋನ್ನ, ದಿಲೀಪ್ ಪಾಟೀಲ, ನಾಗೇಂದ್ರಪ್ಪ ಜಮಾದಾರ, ಭೀಮಶಾ ಮನ್ನಳ್ಳಿ ಇದ್ದರು.