ಕಲಬುರಗಿ; ನಗರದ ಜಗತ್ ಬಡಾವಣೆಯಲ್ಲಿರುವ ಶರಣ ಡೋಹರ ಕಕ್ಕಯ್ಯ ದೇವಸ್ಥಾನದಲ್ಲಿ ಶರಣ ಡೋಹರ ಕಕ್ಕಯ್ಯ ಟ್ರಸ್ಟ್ ವತಿಯಿಂದ ಶ್ರಾವಣ ಮಾಸದ ನಿಮಿತ್ಯ ಒಂದು ತಿಂಗಳ ಸತತವಾಗಿ ನಡೆದ ಬಂದ ಭಜನಾ ಹಾಗೂ ಮಂಗಲ ಕಾರ್ಯಕ್ರಮಕ್ಕೆ ಮಾತಾ ಅಕ್ಕಮಹಾದೇವಿ ಆಶ್ರಮದ ಪೂಜ್ಯ ಶ್ರೀ ಪ್ರಭು ತಾಯಿ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ತೂಕ ಮತ್ತು ಮಾಪನ ಇಲಾಖೆಯ ಸಹಾಯಕ ನಿಯಂತ್ರಕರಾದ ಮನೋಜಕುಮಾರ ಗಾಜರೆ, ಪಿ.ಎಸ್.ಐ ಯಶೋದಾ ಕಟಕೆ, ಶರಣ ಡೋಹರ ಕಕ್ಕಯ್ಯ ಟ್ರಸ್ಟನ್ ಅಧ್ಯಕ್ಷ ಸಾಯಿಬಣ್ಣ ಎಂ.ಹೋಳಕರ್, ಲಕ್ಷ್ಮೀದೇವಿ, ಅಮೃತ ಜಗದೆ, ಟ್ರಸ್ಟ್ನ್ ಪ್ರಧಾನ ಕಾರ್ಯದರ್ಶಿ ಮೋತಿಲಾಲ ಕಟಕೆ, ಹಾಗೂ ಟ್ರಸ್ಟನ್ ನಿರ್ದೇಶಕರು, ಸದಸ್ಯರು, ಸಮಾಜದ ಬಾಂದವರು, ಬಡಾವಣೆಯ ಮುಖಂಡರು ಉಪಸ್ಥರಿದ್ದರು.