ಶ್ರಾವಣ ಮಾಸದ ಮುಕ್ತಾಯ ದಿನದಂದು ಅನ್ನ ದಾಸೋಹ 

0
13

ಕಲಬುರಗಿ : ಶ್ರೀ ಕೇರಿ ಬಸಮ್ಮ ದೇವಿ ಸುಕ್ಷೇತ್ರ ನಂದಿಕೂರ ವತಿಯಿಂದ ಶ್ರೀ ಮರಗಮ್ಮ ಮತ್ತು ದುರ್ಗಾಮ್ಮ ದೇವಿ ದೇವಸ್ಥಾನ ನಗರದ ರಾಮ ಮಂದಿರ ವೃತ್ತದಲ್ಲಿ ಹಾಗೂ ಶ್ರೀ ಹನುಮಾನ ದೇವಸ್ಥಾನ ನವದಗಿ ಉದನೂರ ಕ್ರಾಸ್‌ನಲ್ಲಿ ೩೦ ದಿವಸಗಳ ಶ್ರಾವಣ ಮಾಸದ ಪ್ರಯುಕ್ತ ದಿನಾಲೂ ಅನ್ನ ದಾಸೋಹವನ್ನು ಶ್ರೀಶ್ರೀಶ್ರೀ ಶಿವಲಿಂಗ ಶರಣರು ನಂದಿಕೂರ ಇವರ ಅಮೃತ ಹಸ್ತಾದಿಂದ ಪ್ರಾರಂಭವಾಗಿದ್ದು ಮತ್ತು ಶ್ರಾವಣ ಮಾಸದ ಮುಕ್ತಾಯ ದಿನದಂದು ಅನ್ನ ದಾಸೋಹಕ್ಕೆ ಸರ್ವರೀತಿಯಿಂದ ಸಹಾಯ ಮಾಡಿದ ಭಕ್ತರಿಗೆ ಆಶಿರ್ವಾದ ಮಾಡಿದಾರೆ.

ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಸದಸ್ಯ ಪವನಕುಮಾರ ವಳಕೇರಿ ಮಾತನಾಡಿ ಶ್ರೀಶ್ರೀಶ್ರೀ ಶಿವಲಿಂಗ ಶರಣರು ನೇತೃತ್ವದಲ್ಲಿ ರಾಮಮಂದಿರ ವೃತ್ತ ಹಾಗೂ ಉದನೂರ ಕ್ರಾಸ್‌ನಲ್ಲಿ ೩೦ ದಿನಗಳಕಾಲ ಎರಡು ಕಡೆ ಪ್ರಸಾದವನ್ನು ಸಾವಿರಾರು ಭಕ್ತರಿಗೆ ಊಟದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನೇರವೆರಿಸಿದ್ದಾರೆ ಎಂದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಮಲ್ಲಣಗೌಡ ಪೋಲಿಸ್ ಪಾಟೀಲ ನಂದಿಕೂರ, ಗ್ರಾಮ ಪಂಚಾಯತ ಅಧ್ಯಕ್ಷ ಸಂಗಣಗೌಡ ಮಾಲಿಪಾಟೀಲ, ಸಾತಖೇಡ, ಈಶಣಗೌಡ ಪೋಲಿಸ ಪಾಟೀಲ ಪಡದಳ್ಳಿ, ಶ್ರೀಮಂತ ರಾಠೋಡ ನಂದಿಕೂರ ತಾಂಡಾ ಸೇರಿ ವಿವಿಧ ಗ್ರಾಮಸ್ಥರು, ಭಕ್ತಾಧಿಗಳು ಇದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here