ಜಯಕರ್ನಾಟಕ ವಣಿಕ್ಯಾಳ ಗ್ರಾಮ ಶಾಖೆ ರಚನೆ

0
17

ಸುರಪುರ: ಜಯಕರ್ನಾಟಕ ಸಂಘಟನೆಯ ವಣಿಕ್ಯಾಳ ಗ್ರಾಮದ ಶಾಖೆಯನ್ನು ರಚನೆ ಮಾಡಿ ಪದಾಧಿಕಾರಿಗಳನ್ನು ನೇಮಕಗೊಳಿಸಲಾಯಿತು.

ಈ ಸಂದರ್ಭದಲ್ಲಿ ಸಂಘಟನೆಯ ತಾಲೂಕು ಅಧ್ಯಕ್ಷ ಮಲ್ಲಪ್ಪ ನಾಯಕ ಮಾತನಾಡಿ,ಇಂದು ನಾಡಿನ ಸಮಗ್ರ ಅಭಿವೃಧ್ಧಿ ವಿಚಾರಕ್ಕಾಗಿ ಸದಾಕಾಲ ಮುಂಚುಣಿಯಲ್ಲಿರುವ ಸಂಘಟನೆ ಎಂದರೆ ಅದು ಮುತ್ತಪ್ಪ ರೈ ಅವರ ಸಂಸ್ಥಾಪಕತ್ವದ ಬಿ.ಎನ್.ಜಗದೀಶ ಅಣ್ಣನವರ ಮಾರ್ಗದರ್ಶನದ ಜಯಕರ್ನಾಟಕ ಸಂಘಟನೆಯಾಗಿದೆ ಎಂದರು.

Contact Your\'s Advertisement; 9902492681

ಅಲ್ಲದೆ ಇಂದು ನಾಡಿನಾದ್ಯಂತ ಎಲ್ಲೆಡೆ ಜಯಕರ್ನಾಟಕ ಸಂಘಟನೆಗೆ ನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಜನರು ಸಂಘಟನೆಗೆ ಸೇರುವ ಮೂಲಕ ನಾಡ ಸೇವೆಗೆ ಮುಂದಾಗುತ್ತಿರುವುದು ಸಂತೋಷದ ಸಂಗತಿಯಾಗಿದೆ ಎಂದರು.ಅದಕ್ಕೆ ಸಾಕ್ಷಿ ಎಂಬಂತೆ ಇಂದು ನಮ್ಮ ನಗರದ ವಣಿಕ್ಯಾಳದಲ್ಲಿನ ಎಲ್ಲರು ನಾಡು ನುಡಿ ಸೇವೆಗಾಗಿ ಶಾಖೆಯನ್ನು ರಚನೆ ಮಾಡಿಕೊಂಡು ನಮ್ಮೊಂದಿಗೆ ಭಾಗವಹಿಸುತ್ತಿರುವುದು ಸಂತೋಷ ಮೂಡಿಸಿದೆ ಎಂದರು.

ಇದೇ ಸಂದರ್ಭದಲ್ಲಿ ತಾಲೂಕು ಪ್ರಧಾನ ಕಾರ್ಯದರ್ಶಿ ಯಲ್ಲಪ್ಪ ನಾಯಕ ಮಾತನಾಡಿದರು,ಜಿಲ್ಲಾ ಉಪಾಧ್ಯಕ್ಷ ಶರಣು ಬೈರಿಮರಡಿಯವರು ನೂತನ ಪದಾಧಿಕಾರಿಗಳನ್ನು ಘೋಷಿಸಿದರು.ಈ ಸಂದರ್ಭದಲ್ಲಿ ಮುಖಂಡರಾಧ ಶರಣು ಬಳಿ ಲಕ್ಷ್ಮೀಪುರ,ಹೊನ್ನಪ್ಪ ಬೈರಿಮರಡಿ,ಗೋಪಾಲ ನಾಯಕ,ಮಹ್ಮದ್ ಫಯಾಜ್,ಶಿವಕುಮಾರ ವಗ್ಗಾರ,ಮೌನೇಶ ದಳಪತಿ,ಚಂದ್ರು ದೇವರಗೋನಾಲ,ರಾಘವೇಂದ್ರ ಕಟ್ಟಿಮನಿ,ಬಸ್ಸಪ್ಪ ಯಳವಾರ,ದೊಡ್ಡಮರೆಪ್ಪ ಕೊಮ್ಮಾರಿ,ರವಿ ನಾಯಕ,ಹಣಮಂತ ನಾಯಕ ಸೇರಿ ಅನೇಕರಿದ್ದರು.

ಪದಾಧಿಕಾರಿಗಳು: ಮರಿಸ್ವಾಮಿ ಗೌರವಾಧ್ಯಕ್ಷ,ಮಾರುತಿ ಅಧ್ಯಕ್ಷ,ದುರ್ಗಪ್ಪ ಉಪಾಧ್ಯಕ್ಷ,ಯಮನಪ್ಪ ಪ್ರಧಾನ ಕಾರ್ಯದರ್ಶಿ,ಯಲ್ಲಪ್ಪ ಕಾರ್ಯದರ್ಶಿ,ಮರೆಪ್ಪ ಸಹಕಾರ್ಯದರ್ಶಿ,ದುರ್ಗಪ್ಪ ಖಜಾಂಚಿ,ನಾಗರಾಜ ಸಂಚಾಲಕ,ಕರೆಪ್ಪ,ಅಪ್ಪಾಜಿ,ದೇವಿಂದ್ರಪ್ಪ ಸದಸ್ಯರಾಗಿ ನೇಮಕಗೊಳಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here