ಗ್ರಾಮೀಣ ಪ್ರದೇಶಗಳಿಗೆ ಬಸ್ ಸೌಲಭ್ಯಕ್ಕೆ ಜೆಡಿಎಸ್ ಮನವಿ

0
8

ಸುರಪುರ: ನಾರಾಯಣಪೂರ ದಿಂದ ಕಕ್ಕೇರಾ ಮೂಲಕ ಜಿಲ್ಲಾ ಕೇಂದ್ರ ಯಾದಗಿರಿಗೆ ಬಸ್ ಸೌಲಭ್ಯ ಒದಗಿಸಬೇಕು ಹಾಗೂ ಸುರಪುರ ಕೇಂದ್ರ ಬಸ್ ನಿಲ್ದಾಣದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಜನತಾದಳ(ಜಾತ್ಯಾತೀತ) ಪಕ್ಷದ ಮುಖಂಡರು ಒತ್ತಾಯಿಸಿದ್ದಾರೆ.

ಈ ಕುರಿತು ಡಿಪೋ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಸ್ತಾದ ವಜಾಹತ್ ಹುಸೇನ ಮಾತನಾಡಿ ಸುರಪುರ ಮತಕ್ಷೇತ್ರದ ಕೊನೆ ಭಾಗದಲ್ಲಿರುವ ನಾರಾಯಣಪೂರ ದಿಂದ ಬೆಳಿಗ್ಗೆ ಕಕ್ಕೇರಾ ಮಾರ್ಗವಾಗಿ ಜಿಲ್ಲಾ ಯಾದಗಿರಿಗೆ ಬಸ್ ಸಂಚಾರ ಕೈಗೊಳ್ಳಬೇಕು ಇದರಿಂದ ಈ ಭಾಗದ ಜನರಿಗೆ ಕಚೇರಿ ಕೆಲಸಕ್ಕೆ ಅನುಕೂಲವಾಗಲಿದೆ ಎಂದು ಒತ್ತಾಯಿಸಿರುವ ಅವರು ಅಲ್ಲದೆ ಸುರಪುರ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರು, ನೈರ್ಮಲ್ಯ, ಸುರಕ್ಷತೆ ವ್ಯವಸ್ಥೆಗಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Contact Your\'s Advertisement; 9902492681

ಡಿಪೋ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಯಿತು, ತಾಲೂಕು ಅಧ್ಯಕ್ಷ ಶೌಕತ್ ಅಲಿ ಖುರೇಷಿ, ಅಲ್ತಾಫ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here