ಸ್ಟೇಷನ್ ಬಜಾರ ಪೊಲೀಸ್ ಠಾಣೆ ಕಾರ್ಯಚರಣೆ: ಎಟಿಎಂ ಲೂಟಿಗೆ ಯತ್ನ: ಆರೋಪಿ ಬಂಧನ

0
89

ಕಲಬುರಗಿ: ನಿನ್ನೆ ರಾತ್ರಿ 2 ಗಂಟೆಗೆ ನಗರದ ಹೊಸ ಜೇವರ್ಗಿ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಎಟಿಎಂ ಒಡೆದು ಹಣ ಲೋಟಿ ಮಾಡಲು ಯತ್ನಿಸಿದ ಆರೋಪಿಯನ್ನು ಸ್ಟೇಷನ್ ಬಜಾರ್ ಪೊಲೀಸರು ಇಂದು ಕಾರ್ಯಚರಣೆ ನಡೆಸಿ ಆರೋಪಿಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಂತೋಷ ಹರಿಶ್ ಚಂದ್ರ ರಾಠೋಡ್ (22) ಬಂಧಿತ ಆರೋಪಿ, ಮೂಲತಃ ಚಿತ್ತಾಪೂರ ತಾಲ್ಲೂಕಿನ ಮುಗಳನಾಗಾವಿ ಗ್ರಾಮದ ನಿವಾಸಿಯಾಗಿದ ಇತ, ನಗರದ ಜಮಶೆಟ್ಟಿ ಬಡಾವಣೆಯಲ್ಲಿ ವಾಸಿಸುತ್ತಿದ್ದು, ನಿನ್ನೆ ರಾತ್ರಿ ತನ್ನ ಮೋಜಿನ ಜೀವನಕ್ಕಾಗಿ ರಾತ್ರಿಯಲ್ಲಿ ಎಟಿಎಂಗೆ ಬಂದು ಪೈಬರ್ ಡೋರ್ ಮುರಿದು ಎಟಿಎಂನ ಹಣ ಲೂಟಿ ಮಾಡಲು ಯತ್ನಿಸಿದ ನಡೆಸಿದ್ದಾನೆಂದು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯ ಅಧಿಕ್ಷಕರಾದ ಎಲ್.ಎಚ್ ಗೌಂಡಿ ಅವರು ತಿಳಿಸಿದ್ದಾರೆ.

Contact Your\'s Advertisement; 9902492681

ಅಧೀಕ್ಷಕ ಎಲ್ ಎಚ್ ಗೌಂಡಿ ಅವರ ನೇತೃತ್ವದ ತಂಡದ ಪಿಎಸ್.ಐ ಉದಂಡಪ್ಪ ಸಿಬ್ಬಂದಿ ಎಚ್.ಸಿ ನಜಮುದ್ದೀನ್, ಜೈ ಭೀಮ್, ಶಿವಾನಂದ ಹಾಗೂ ಪಿ.ಸಿ ಸುಲ್ತಾನ್, ಫೈರೋಜ್, ಕಾರ್ಯಚರಣೆ ನಡೆಸಿ ಆರೋಪಿ ಸಂತೋಷ ಮತ್ತು ಕೃತ್ಯಕ್ಕೆ ಬಳಸಿದ ಬೈಕ್ ಮತ್ತು ಕಬ್ಬಿಣದ ರಾಡನ್ನು ವಶಪಡಿಸಿಕೊಂಡಿದ್ದಾರೆ ಎಂದು ಗೌಂಡಿ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here