ಪತ್ರಿಕೆ ತಲುಪಿಸುವಲ್ಲಿ ಪತ್ರಿಕಾ ವಿತರಕರ ಪಾತ್ರ ಬಹುಮುಖ್ಯ: ರಘುವೀರಸಿಂಗ ಠಾಕೂರ

0
240

ಶಹಾಬಾದ: ಒಬ್ಬ ವರದಿಗಾರ ಸುದ್ದಿಯನ್ನು ಬರೆಯಬಹುದು, ಪತ್ರಿಕೆಯಲ್ಲಿ ಅದನ್ನು ಪ್ರಕಟಿಸಬಹುದು. ಆದರೆ ಅದನ್ನು ಜನರಿಗೆ ತಲುಪಿಸುವ ಕಾರ್ಯ ಪ್ರಮುಖವಾದದ್ದು, ಅದನ್ನು ಮಾಡುವವರು ಇಲ್ಲದಿದ್ದರೆ ಇಡೀ ದಿನ ಮಾಡಿದ ಕೆಲಸ ವ್ಯರ್ಥವಾಗುತ್ತದೆ ಎಂದು ಕಾರ್ಯನಿರತ ಪತ್ರಕರ್ತ ಸಂಘದ ತಾಲೂಕಾಧ್ಯಕ್ಷ ರಘುವೀರಸಿಂಗ ಠಾಕೂರ ಹೇಳಿದರು.

ಅವರು ಶನಿವಾರ ಸಮೀಪದ ನಿಜಾಮಬಜಾರನಲ್ಲಿರುವ ಬೆಂಕಿತಾತತನವರ ಮಠದಲ್ಲಿ ಶಹಾಬಾದ ಗೆಳೆಯರ ಬಳಗದ ವತಿಯಿಂದ ಪತ್ರಿಕಾ ವಿತರಕರಿಗೆ ಮತ್ತು ನೂತನ ಪತ್ರಕರ್ತರಿಗೆ ಹಾಗೂ ನೂತನವಾಗಿ ನೇಮಕಗೊಂಡ ಕಸಾಪ ಜಿಲ್ಲಾ ಸಹಕಾರ್ಯದರ್ಶಿಗೆ ಆಯೋಜಿಸಲಾದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

Contact Your\'s Advertisement; 9902492681

ಜನಸಾಮಾನ್ಯರಿಗೆ ಬೆಳಗ್ಗೆ ಏಳುತ್ತಲೇ ಪತ್ರಿಕೆ ಓದುವ ಹವ್ಯಾಸ ಇರುವುದು ಸಹಜ. ಅದನ್ನು ತಲುಪಿಸುವಲ್ಲಿ ಪತ್ರಿಕಾ ವಿತರಕರ ಪಾತ್ರ ಬಹುಮುಖ್ಯವಾಗಿದೆ. ಬೇಸಿಗೆ, ಚಳಿ, ಮಳೆ ಎನ್ನದೆ ಪ್ರತಿನಿತ್ಯ ಬೆಳಗ್ಗೆ ಪತ್ರಿಕೆಗಳನ್ನು ಮನೆಮನೆಗೆ ತಲುಪಿಸವ ಕಾರ್ಯ ಮಾಡುತ್ತಾರೆ. ಜಗತ್ತು ಎμÉ್ಟೀ ಆಧುನಿಕತೆಯಲ್ಲಿ ಬೆಳೆದರೂ ಪತ್ರಿಕೆಗಳನ್ನು ಓದುವುದನ್ನು ಮಾತ್ರ ಯಾರೂ ಬಿಡುವುದಿಲ್ಲ. ಈ ನಿಟ್ಟಿನಲ್ಲಿ ಪತ್ರಿಕಾ ವಿತರಕರನ್ನು ಸಮಾಜದಲ್ಲಿ ಗೌರವದಿಂದ ಕಾಣಬೇಕು. ಯಾವುದೇ ಕ್ಷೇತ್ರದಲ್ಲಾದರೂ ತಮ್ಮ ಕೆಲಸಕ್ಕೆ ತಕ್ಕಂತೆ ಗೌರವ ಇರುತ್ತದೆ. ಅದೇ ರೀತಿ ಪತ್ರಿಕಾ ವಿತರಕರನ್ನೂ ಕೂಡ ಗೌರವಿಸುವಂತಾಗಬೇಕು ಎಂದು ತಿಳಿಸಿದರು.

ಕಸಾಪ ಗೌರವ ಕಾರ್ಯದರ್ಶಿ ಬಸವರಾಜ ಮದ್ರಿಕಿ ಮಾತನಾಡಿ, ನೂತನ ಪತ್ರಕರ್ತರು ಹಿರಿಯರ ಮಾರ್ಗದರ್ಶನ ಪಡೆಯುವುದು ಅವಶ್ಯಕತೆಯಿದೆ.ಇತ್ತೀಚೆಗೆ ಮಾಧ್ಯಮಗಳು ಬದಲಾಗುತ್ತಿವೆ.ಬದಲಾವಣೆ ಜಗದ ನಿಯಮ.ಅದರ ಜತೆ ಸತ್ಯ ಹಾಗೂ ನೈಜ ಸುದ್ದಿಗಳಿಗೆ ಮಾನ್ಯತೆ ಕೊಡಬೇಕೆಂದು ಹೇಳಿದರು.

ಇದೇ ಸಂದರ್ಭದಲ್ಲಿ ಪತ್ರಿಕಾ ವಿತರಕರಾದ ಶರಣಬಸಪ್ಪ ಕಡಗಂಚಿ, ವೀರಪ್ಪ ನಾಲವಾರ,ಪವನ ಗೊಬ್ಬೂರಕರ್ ಮತ್ತು ನೂತನ ಪತ್ರಕರ್ತರಾದ ಮಹ್ಮದ್ ಮುಸ್ತಾಕ, ಮಹ್ಮದ್ ರಫಿಕ್,ಜಾಕೀರ ಹುಸೇನ್ ಮಿರ್ದೆ ಹಾಗೂ ಕಸಾಪ ಜಿಲ್ಲಾ ಸಹಕಾರ್ಯದರ್ಶಿ ನಾಗಣ್ಣ ರಾಂಪೂರೆ ಅವರಿಗೆ ಸನ್ಮಾನಿಸಲಾಯಿತು.

ವಿಜಯಕುಮಾರ ಮಾಣಿಕ, ರೇವಣಸಿದ್ದಪ್ಪ ಮಾಣಿಕ್, ಶಾಂತು ಮಾಣಿಕ್,ಶರಣು ವಸ್ತ್ರದ್,ಬಸವರಾಜ ಮದ್ರಿಕಿ, ಲೋಹಿತ್ ಕಟ್ಟಿ, ದಶರಥ ಕೋಟನೂರ್, ರಾಜು ಕೋಬಾಳ,ಆನಂದ ಘಂಟಿಮಠ, ಸದಾನಂದ ಕುಂಬಾರ, ಕಾಶಪ್ಪ ಚನ್ನೂರ್, ಮಹ್ಮದ್ ಫಯಾಜ್, ಭೀಮಯ್ಯ ಗುತ್ತೆದಾರ, ರಾಜೇಶ ಯನಗುಂಟಿ, ನಾಗರಾಜ ದಂಡಾವತಿ, ಶಿವಕುಮಾರ ಕುಸಾಳೆ,ಮರಲಿಂಗ ಗಂಗಭೋ,ರವಿ ಸಣತಮ,ಡಾ.ಸಂಜಯ್ ಜಿಂಗಾಡೆ, ಡಾ.ವೆಂಕಟೇಶ ನಾಯಿಕೊಡಿ, ಫಜಲ್ ಪಟೇಲ್,ಮಹ್ಮದ್ ದಾವೂದ್,ಚಂದನ ಬುರ್‍ಬುರೆ, ಯುಸೂಫ್ ಚೌದ್ರಿ, ನಿಂಗಪ್ಪ ಗೋಳಾ,ಶಿವಕುಮಾರ ನಾಯ್ಕಲ್ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here