ನ .1 ಕ್ಕೆ ಅದ್ದೂರಿ ಜನ್ಮದಿನಾಚರಣೆಗೆ ಸಿದ್ಧತೆ

0
10

ಕಲಬುರಗಿ : ಶ್ರೀ ಶರಣಬಸವೇಶ್ವರ ಸಂಸ್ಥಾನದ 8 ನೇ ಪೀಠಾಧಿಪತಿಯವರಾದ ಶರಣಬಸವಪ್ಪ ಡಾ. ಅಪ್ಪ, 9ನೇ ಚಿರಂಜೀವಿ ಪೀಠಾಧಿಪತಿಯವರಾದ ದೊಡ್ಡಪ್ಪ ಅಪ್ಪ ಮತ್ತು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್ ಪರ್ಸನ್ ಅವರಾದ ಮಾತೋಶ್ರೀ ಡಾ. ದಾಕ್ಷಾ ಯಣಿ ಅವ್ವಾ ಅವರ ಜನ್ಮದಿನವನ್ನು ನವೆಂಬರ್ 1 ರಂದು ನಗರದಲ್ಲಿ ಅದ್ದೂರಿಯಾಗಿ ಆಚರಿಸಲು ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಅರುಣಕುಮಾರ ಪಾಟೀಲ್ ಕೊಡಲಹಂಗರಗಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು. ಜಿಲ್ಲಾ ವೀರಶೈವ ಸಮಾಜದ ವತಿಯಿಂದ ಪಕ್ಷಾತೀತ ಜಾತ್ಯತೀತವಾಗಿ ಆಚರಣೆಯನ್ನು ಬಸವರಾಜ ಅಪ್ಪ ಸಭಾಗಣದಲ್ಲಿ ಸಭಾಂಗಣ ಸೆಂಟರ್ ಹಾಲನಲ್ಲಿ ಆಚರಿಸಲು ನಿರ್ಣಯಿಸಲಾಯಿತು.

ಕಾರ್ಯಕ್ರಮದ ಪ್ರಯುಕ್ತ ವಚನ ಸ್ಪರ್ಧೆ, ವಾಲಿಬಾಲ್, ನಿಬಂಧ ಸ್ಪರ್ಧೆ ಆಯೋಜಿಸಲಾಗುತ್ತದೆ. ಕಾರ್ಯಕ್ರಮಕ್ಕೆ ನಾಡಿನ ಮಹಾಸ್ವಾಮೀಜಿಗಳು, ಅತ್ಯಂತ ಹಿರಿಯರು, ಗಣ್ಯರನ್ನು, ಸಚಿವರನ್ನು ಶಾಸಕರನ್ನು ಆಹ್ವಾನಿಸಲಾಗುತ್ತದೆ. ಇದೇ ಸಂದರ್ಭದಲ್ಲಿ ಉಪಾಧ್ಯಕ್ಷ ಕಲ್ಯಾಣಪ್ಪ ಪಾಟೀಲ್, ಎಸ್.ವಿ ಮಠಪತಿ, ಕೋಶಾಧ್ಯಕ್ಷ ಚಂದ್ರಶೇಖರ ತಳ್ಳಳ್ಳಿ, ಗಣ್ಯರಾದ ಶಿವಪುತ್ರ ಡೆಂಕೆ, ಶರಣಗೌಡ ಪಾಟೀಲ್, ರವಿ ಬಿರಾದಾರ, ಶಿವಕಾಂತ ಮಹಾಜನ್, ರಮೇಶ ಪಾಟೀಲ್, ರೇವಣಸಿದ್ದಪ್ಪ ಬಡಾ, ಶಶಿಧರ ಮಾಗಿ, ರವಿ ವಿಭೂತಿ, ಪರಮೇಶ್ವರ ಗುಡ್ಡಾ, ಮಲ್ಲಿನಾಥ ಪಾಟೀಲ್, ಮಂಜು ರೆಡ್ಡಿ, ಜಗನ್ನಾಥ ಪಟ್ಟಣಶೆಟ್ಟಿ, ಅವಿನಾಶ ಪಟ್ಟಣಕರ್, ಡಾ. ಶ್ರೀಶೈಲ ಘೋಳಿ, ಶರಣು ಪಪ್ಪಾ, ಅಮರನಾಥ ಸಾಹು ಕುಳಗೇರಿ, ಶರಣು, ಅವಿನಾಶ ಸೇರಿದಂತೆ ಇನ್ನಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here