ಬಹುಮನಿ ರಾಜ್ಯದ ಸ್ಥಾಪನೆಯ ದಿನದ ಅಂಗವಾಗಿ ಇನ್‌ಟ್ಯಾಕ್ ವತಿಯಿಂದ ಐತಿಹಾಸಿಕ ಸ್ಮಾರಕಗಳ ಜಾಗೃತ ಅಭಿಯಾನ

0
54

ಕಲಬುರಗಿ: ಇನ್‌ಟ್ಯಾಕ್ ಅಧ್ಯಯದ ವತಿಯಿಂದ ಬಹಮನಿ ರಾಜ್ಯದ ಸಂಸ್ಥಾಪನೆಯ ದಿನಾಚರಣೆಯ ಅಂಗವಾಗಿ ಐತಿಹಾಸಿಕ ಸ್ಮಾರಕಗಳ ಜಾಗೃತಿ ಕಾರ್ಯಕ್ರಮದ ಅಡಿಯಲ್ಲಿ ಕೋಟೆಯ ದರ್ಶನ ಹಾಗೂ ಬಹಮನಿ ರಾಜ್ಯದ ಕುರಿತು ವಿಶೇಷ ಉಪನ್ಯಾಸವನ್ನು ಹಮ್ಮಿಕೊಳ್ಳಲಾಯಿತು.

ಸರಕಾರಿ ಕಾಲೇಜಿನ ಇತಿಹಾಸ ವಿಭಾಗದ ಪ್ರದ್ಯಾಪಕರಾದ ಡಾ.ಶಂಭುಲಿಂಗ ವಾಣಿಯವರು ಬಹಮನಿ ರಾಜ್ಯದ ಕುರಿತು ಉಪನ್ಯಾಸದಲ್ಲಿ ಮಾತನಾಡುತ್ತಾ ಈ ರಾಜ್ಯ ಕ್ರಿ.ಶ. ೧೩೪೭ ದೌಲತಾಬಾದನಲ್ಲಿ ಸ್ಥಾಪನಗೊಂಡಿತ್ತು. ರಾಜ್ಯದ ಸ್ಥಾಪನೆಗೆ ಕಾರಣಿಭೂತನಾದ ವ್ಯಕ್ತಿ ’ಇಸ್ಮಾಯಿಲ್ ಖಾನ್’ ಆದರೆ ಇತನಿಗೆ ಗಂಡು ಮಕ್ಕಳಿಲ್ಲದ ಕಾರಣ ತನ್ನ ನಿಷ್ಠಾವಂತ ಸೇನಾ ಅಧಿಕಾರಿಯಾದ ಹಸನ್‌ಖಾನ್ (ಜಾಫರ್ ಖಾನ್) ನನ್ನು ಆಯ್ಕೆ ಮಾಡಿ ಆತನಿಗೆ ಅಲ್ಲಾವುದ್ದೀನ್ ಹಸನ್ ಬಹಮನ್ ಶಹಾ ಎಂದು ಬಿರುದು ನೀಡಿ, ಆತನ ಹೆಸರಿನಲ್ಲಿ ಕುತವಾ ಪಠಿಸಿ ಬಹಮನಿ ಗದ್ದುಗೆಯ ಮೇಲೆ ಕುಳ್ಳರಿಸಲಾಯಿತು ಎಂದು ಡಾ.ವಾಣಿಯವರು ತಮ್ಮ ಉಪನ್ಯಾಸದಲ್ಲಿ ವಿವರಿಸಿದರು.

Contact Your\'s Advertisement; 9902492681

ದೌಲತಾಬಾದ ಮಹಮ್ಮದ್-ಬಿನ್-ತುಘಲಕನ್ ಅಧೀನದಲ್ಲಿರುವುದರಿಂದ ಇದು ತನಗೆ ಸುರಕ್ಷಿತ ಸ್ಥಳ ಅಲ್ಲ ಎಂದು, ಸುರಕ್ಷಿತ ಸ್ಥಳವಾದ ಇಂದಿನ ಕಲಬುರಗಿಯನ್ನೇ ತನ್ನ ಹೊಸ ರಾಜ್ಯಧಾನಿಯನ್ನಾಗಿ ಆಯ್ಕೆ ಮಾಡಿಕೊಂಡು ರಾಜ್ಯಧಾನಿಯನ್ನು ಕ್ರಿ.ಶ. ೧೩೫೦-೫೧ ರಲ್ಲಿ ಇಲ್ಲಿಗೆ ವರ್ಗಾಯಿಸಿ ಇದನ್ನು ’ಅಹಸನಾಬಾದ’ ಎಂದು ಪುನರ್ ನಾಮಕರಣ ಮಾಡಿದ. ಈಗಾಗಲೇ ಆಸ್ತಿತ್ವದಲ್ಲಿದ್ದ ಕಲಬುರಗಿ ಕೋಟೆಯನ್ನು ಮುಂದೆ ಬಂದ ಸುಲ್ತಾನರು ತಮ್ಮ ಅನುಕೂಲಕ್ಕೆ ತಕ್ಕಂತೆ ಪುನರ್ ರಚಿಸಿ, ಇದರ ಒಳಗಡೆ ಮತ್ತು ನಗರದ ಹಲವು ಭಾಗಗಳಲ್ಲಿ ಕಟ್ಟಡಗಳನ್ನು ನಿರ್ಮಿಸಿದರು ಅಲ್ಲದೆ ಮುಂದಿನ ದಿನಗಳಲ್ಲಿ ರಾಜ್ಯಧಾನಿಯನ್ನು ಫಿರೋಜಾಬಾದ್, ಬೀದರಗಳಿಗೆ ವರ್ಗಾಯಿಸಿ, ಕ್ರಿ.ಶ. ೧೫೩೦ ರವರೆಗೆ ಒಟ್ಟು ೧೮ ಜನ ಸುಲ್ತಾನರು ಆಲ್ವೀಕೆ ಮಾಡಿರುವ ವಿಷಯವನ್ನು ಕುರಿತು ವಿವರಿಸಿದರು.

ಇನ್‌ಟ್ಯಾಕನ್ ಸಹಾಯಕ ಸಂಯೋಜಕರು ಹಾಗೂ ಇತಿಹಾಸ ಪ್ರಾಧ್ಯಾಪಕ ಡಾ.ಶಶಿಶೇಖರ ರೆಡ್ಡಿ ಮಾತನಾಡಿ ಇವರು ’ಕೋಟೆಯದಶೇನ ಕುರಿತು ವಿದ್ಯಾರ್ಥಿಗಳಿಗೆ ಕೋಟೆಯ ಒಳಗಡೆ ನಿರ್ಮಾಣಗೊಂಡ ಜಾಮಿಮಸೀದಿ, ರಣಮಂಡಲ, ಕಾವಲು ಗೋಪುರಗಳು ಹಾಗೂ ಇತರ ಕಟ್ಟಡಗಳ ಮಾಹಿತಿ ನೀಡಿದರು. ಸಹ-ಸಂಯೋಜಕರಾದ ಡಾ.ಎಂ.ಎಸ್.ಕುಂಬಾರ ಇವರು ಇನ್‌ಟ್ಯಾಕನ ಕಾರ್ಯ ಸಾಧನೆಗಳನ್ನು ಕುರಿತು ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ಹೇಳಿದರು.

ಕಾರ್ಯಕ್ರಮದಲ್ಲಿ ಡಾ.ಭೀಮಣ್ಣಾ ಘನಾತೆ, ಪ್ರೊ.ಚಂದ್ರಶೇಖರ ಅನಾದಿ, ಪ್ರೊ.ಚನ್ನಕ್ಕಿ ನಾಗಪ್ಪ, ಪ್ರೊ.ಖಾಜಿ ಅತಿಯಾ ಪರ್ವಿನ್, ಶ್ರೀ ರವಿಕುಮಾರ ಹಾಗೂ ಸರಕಾರಿ ಪದವಿ ಕಾಲೇಜು ಮತ್ತು ಸರಕಾರಿ ಮಹಿಳಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here