ಸೌಹಾರ್ದ ಸಮಾಜಕ್ಕೆ ಬುದ್ಧ ಸಂದೇಶವೇ ಬುನಾದಿ: ಡಾ. ಮಲ್ಲಿಕಾರ್ಜುನ್ ಖರ್ಗೆ

0
32
ಬುದ್ಧ ವಿಹಾರದಲ್ಲಿ 66ನೇ ಧಮ್ಮಚಕ್ರ ಪ್ರವರ್ತನ ದಿನಾಚರಣೆ

ಕಲಬುರಗಿ:  ಸಮಾಜದಲ್ಲಿಎಲ್ಲರೂ ಸೌಹಾರ್ದಯುತವಾಗಿ ಬಾಳುವ ನಿಟ್ಟಿನಲ್ಲಿ ಮಹಾತ್ಮಾಗೌತಮಬುದ್ಧರ ಸಂದೇಶಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಮಾಜಿ ಸಚಿವ ಹಾಗೂ ರಾಜ್ಯಸಭೆ ಮಾಜಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ನುಡಿದರು.

ಇಲ್ಲಿನ ಸೇಡಂರಸ್ತೆಯಲಿರುವ ಬುದ್ಧ ವಿಹಾರದಲ್ಲಿಇಂದು 66ನೇ ಧಮ್ಮಚಕ್ರ ಪ್ರವರ್ತನ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು. ರಾಜ್ಯಸಭೆಯ ಮಾಜಿ ವಿರೋಧ ಪಕ್ಷದ ನಾಯಕ ಹಾಗೂ ಮಾಜಿಕೇಂದ್ರ ಸಚಿವ ಮಲ್ಲಿಕಾರ್ಜುನಖರ್ಗೆಅವರು ಬುದ್ಧ ಮೂರ್ತಿಗೆ ಪುಷ್ಪಾರ್ಷನೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

Contact Your\'s Advertisement; 9902492681

ಬಳಿಕ ಪೂಜ್ಯ ಭಂತೇಜಿಯವರು ಬುದ್ಧ ವಂದನೆ ಸಲ್ಲಿಸಿದರು. ಮಲ್ಲಿಕಾರ್ಜುನಖರ್ಗೆ ಹಾಗೂ ರಾಧಾಬಾಯಿಎಂ.ಖರ್ಗೆ ದಂಪತಿಗಳು ಪೂಜ್ಯ ಭಂತೇಜಿಯವರಿಗೆಚೀವರದಾನಕೈಗೊಂಡುಆತ್ಮೀಯವಾಗಿ ಸನ್ಮಾನಿಸಿದರು.

ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿಖ್ಯಾತ ಲೇಖಕಿ ಡಾ.ಎಚ್.ಎಸ್.ಅನುಪಮಾಅವರು ವಿಶೇಷ ಉಪನ್ಯಾಸ ನೀಡಿ, ಸಾಮ್ರಾಟ್ ಅಶೋಕ ಮತ್ತುಡಾ.ಬಾಬಾ ಸಾಹೇಬ ಅಂಬೇಡ್ಕರ್‍ಅವರುಇದೇ ವಿಜಯದಶಮಿಯಂದುಧ್ಮ್ಮ ದೀಕ್ಷಾ ಪಡೆದ ದಿನ ಇದೊಂದು ಪರಿವರ್ತನೆಯ ಕಾಲ. ಹೀಗಾಗಿ ಧಮ್ಮಚಕ್ರ ಪ್ರವರ್ತನ ದಿನ ಆಚರಿಸಲಾಗುತ್ತದೆಎಂದು ತಿಳಿಸಿದರು.

ಎಐಸಿಸಿ ವೀಕ್ಷಕರು ಹಾಗೂ ರಾಹುಲ್‍ಗಾಂಧಿಯವರರಾಜಕೀಯ ಕಾರ್ಯದರ್ಶಿ ಕೆ.ರಾಜು, ಮಾಜಿ ಸಚಿವಡಾ.ಶರಣಪ್ರಕಾಶ್ ಪಾಟೀಲ್, ಶಾಸಕರಾದರಹೀಂಖಾನ್, ಕಲಬುರಗಿಉತ್ತರ ವಿಧಾನಸಭಾಕ್ಷೇತ್ರದ ಶಾಸಕಿ ಕನೀಜ್ ಫಾತಿಮಾ, ವಿಧಾನ ಪರಿಷತ್ ಮಾಜಿ ಸದಸ್ಯರು ಹಾಗೂ ಸಿದ್ಧಾರ್ಥ ವಿಹಾರಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಮಾರುತಿರಾವ್ ಡಿ. ಮಾಲೆ, ಅಲ್ಲಮಪ್ರಭು ಪಾಟೀಲ್ ನೆಲೋಗಿ, ತಿಪ್ಪಣ್ಣಪ್ಪಕಮಕನೂರ್, ಮಾಜಿ ಶಾಸಕ ಬಿ.ಆರ್.ಪಾಟೀಲ್, ಜಿಲ್ಲಾ ಪಂಚಾಯತಿ ಮಾಜಿಉಪಾಧ್ಯಕ್ಷ ಸುಭಾಷ್‍ರಾಠೋಡ್,
ಖ್ಯಾತ ಸಾಹಿತಿಡಾ.ಎಚ್.ಎಸ್.ಅನುಪಮಾ, ಉದ್ಯಮಿಕೃಷ್ಣಾಜಿಕುಲಕರ್ಣಿ, ಕಾಂಗ್ರೆಸ್ ಮುಖಂಡರಾದ ನೀಲಕಂಠ ಮುಲಗೆ, ಡಾ.ಈಶ್ವರಇಂಗನ್, ಸೇರಿದಂತೆಇನ್ನಿತರರು ಪಾಲ್ಗೊಂಡಿದ್ದರು.

ನೆಲದ ಮರದಧ್ಯಾನ ಬಿಡುಗಡೆ: ಇದೇ ವೇಳೆ ಕರ್ನಾಟಕಕೇಂದ್ರೀಯ ವಿಶ್ವವಿದ್ಯಾಲಯದಕನ್ನಡ ಪ್ರಾಧ್ಯಾಪಕಅಪ್ಪಗೆರೆ ಸೋಮಶೇಖರಅವರು ಬರೆದಿರುವ ‘ನೆರಳು ಮರದಧ್ಯಾನ’ ಕೃತಿಯನ್ನು ಮಾಜಿಕೇಂದ್ರ ಸಚಿವ ಮಲ್ಲಿಕಾರ್ಜುನಖರ್ಗೆಯವರು ಲೋಕಾರ್ಪಣೆಗೊಳಿಸಿದರು. ಡಾ.ಈಶ್ವರಇಂಗನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಎಂ.ಬಿ.ಕಟ್ಟಿ ನಿರೂಪಿಸಿದರು. ಉಪನ್ಯಾಸಕಡಾ.ಚಂದ್ರಶೇಖರದೊಡ್ಡಮನಿ ವಂದಿಸಿದರು.

ಸಮಾಜದ ಒಟ್ಟಾರೆ ಆರೋಗ್ಯವನ್ನು ನಿರೀಕ್ಷಿಸುವ ಪ್ರತಿಯೊಬ್ಬ ವ್ಯಕ್ತಿಗೂ ಬುದ್ಧನ ಸಂದೇಶಗಳನ್ನು ಪಾಲಿಸುವುದು ಅನಿವಾರ್ಯಎಂದು ಕಿವಿಮಾತು ಹೇಳಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here