ಶಹಾಬಾದನಲ್ಲಿ ಮಂಗಳವಾರ ಡಿ.ಸಿ.ಯಶವಂತ ವಿ.ಗುರುಕರ್ ಸಾರ್ವಜನಿಕರಿಂದ ಅಹವಾಲು ಆಲಿಕೆ

0
202

ಕಲಬುರಗಿ; ಜಿಲ್ಲಾಧಿಕಾರಿಗಳ ನಡೆ-ಹಳ್ಳಿ ಕಡೆ ಕಾರ್ಯಕ್ರಮದ ಮುಂದುವರೆದ ಭಾಗವಾಗಿ ಇದೇ ಅಕ್ಟೋಬರ್ 11 ರಂದು (ಮಂಗಳವಾರ) ಶಹಾಬಾದ  ತಹಶೀಲ್ದಾರ ಕಛೇರಿಯಲ್ಲಿ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಅವರು ಉಪಸ್ಥಿತರಿದ್ದು, ತಾಲೂಕಿನ ಜನತೆಯ ಕುಂದುಕೊರತೆಗಳ ಅಹವಾಲು ಆಲಿಸಲಿದ್ದಾರೆ.

ಮಂಗಳವಾರ ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆ ವರೆಗೆ ಶಹಾಬಾದ ತಹಶೀಲ್ದಾರ ಕಚೇರಿಯಲ್ಲಿ ಡಿ.ಸಿ. ಅವರು ಲಭ್ಯವಿರಲಿದ್ದಾರೆ. ತಾಲೂಕಿನ ಗ್ರಾಮಸ್ಥರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಡಿ.ಸಿ. ಯಶವಂತ ವಿ. ಗುರುಕರ್ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

Contact Your\'s Advertisement; 9902492681

ಇದೇ ಮಾಹೆಯಲ್ಲಿ ಅಕ್ಟೋಬರ್ 18 ರಂದು ಚಿತ್ತಾಪೂರ ಮತ್ತು ಅಕ್ಟೋಬರ್ 25 ರಂದು ಕಾಳಗಿ ತಹಶೀಲ್ದಾರ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳು ಸಾರ್ವಜನಿಕರ ಅಹವಾಲು ಆಲಿಸುವರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here