ಕಲಬುರಗಿ; ಜಿಲ್ಲಾಧಿಕಾರಿಗಳ ನಡೆ-ಹಳ್ಳಿ ಕಡೆ ಕಾರ್ಯಕ್ರಮದ ಮುಂದುವರೆದ ಭಾಗವಾಗಿ ಇದೇ ಅಕ್ಟೋಬರ್ 11 ರಂದು (ಮಂಗಳವಾರ) ಶಹಾಬಾದ ತಹಶೀಲ್ದಾರ ಕಛೇರಿಯಲ್ಲಿ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಅವರು ಉಪಸ್ಥಿತರಿದ್ದು, ತಾಲೂಕಿನ ಜನತೆಯ ಕುಂದುಕೊರತೆಗಳ ಅಹವಾಲು ಆಲಿಸಲಿದ್ದಾರೆ.
ಮಂಗಳವಾರ ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆ ವರೆಗೆ ಶಹಾಬಾದ ತಹಶೀಲ್ದಾರ ಕಚೇರಿಯಲ್ಲಿ ಡಿ.ಸಿ. ಅವರು ಲಭ್ಯವಿರಲಿದ್ದಾರೆ. ತಾಲೂಕಿನ ಗ್ರಾಮಸ್ಥರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಡಿ.ಸಿ. ಯಶವಂತ ವಿ. ಗುರುಕರ್ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಇದೇ ಮಾಹೆಯಲ್ಲಿ ಅಕ್ಟೋಬರ್ 18 ರಂದು ಚಿತ್ತಾಪೂರ ಮತ್ತು ಅಕ್ಟೋಬರ್ 25 ರಂದು ಕಾಳಗಿ ತಹಶೀಲ್ದಾರ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳು ಸಾರ್ವಜನಿಕರ ಅಹವಾಲು ಆಲಿಸುವರು.