ಸುರಪುರ:ಮಾಜಿ ಸಚಿವರು ಹಾಗೂ ಬಬಲೇಶ್ವರ ಕ್ಷೇತ್ರದ ಶಾಸಕರು ಹಾಗೂ ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷರಾದ ಎಮ್.ಬಿ.ಪಾಟೀಲ್ ಅವರ ಜನ್ಮ ದಿನಾಚರಣೆ ಅಂಗವಾಗಿ ನಗರದಲ್ಲಿನ ತಾಲೂಕು ಆಸ್ಪತ್ರೆಯಲ್ಲಿ ವೀರಶೈವ ಲಿಂಗಾಯತ ಸಮುದಾಯದ ಮುಖಂಡರು ಹಾಲು ಹಣ್ಣು ಬ್ರೇಡ್ ವಿತರಿಸಿ ವಿಶೇಷವಾಗಿ ಜನ್ಮ ದಿನ ಆಚರಿಸಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳು ಮತ್ತು ಮುಖಂಡರಾದ ಪ್ರದೀಪ ಕದರಾಪುರ,ಜಗದೀಶ ಪಾಟೀಲ್,ಸಿದ್ದನಗೌಡ ಹೆಬ್ಬಾಳ,ಶರಣಬಸವ ದೇಸಾಯಿ,ಪ್ರಕಾಶ ಅಂಗಡಿ ಹೆಮ್ಮಡಗಿ ಸೇರಿದಂತೆ ಅನೇಕರಿದ್ದರು.