ಕಲಬುರಗಿ: ತುಳಸಿ ಕಿರುಚಿತ್ರ ಬಿಡುಗಡೆ

0
402

ಕಲಬುರಗಿ: ಕಾರ್ತೀಕ ಕ್ರೀಯೆಷನ್ ವತಿಯಿಂದ ನಿರ್ಮಾಣವಾದ ತುಳಸಿ ಕಿರುಚಿತ್ರವನ್ನಿ ಪ್ರಶಾಂತ ನಗರದ ಶ್ರೀ ಹನುಮಾನ ಮಂದಿರದಲ್ಲಿ ಬಿಡುಗಡೆಯನ್ನು ಖ್ಯಾತ ನಿರ್ದೇಶಕರಾದ ಮಧುಸೂಧನ ಹವಾಲ್ದಾರ ಬಿಡುಗಡೆ ಮಾಡಿದರು.

ಅರ್ಚಕರಾದ ಗುಂಡಾಚಾರ್ಯ ನರಿಬೊಳ, ರವಿ ಲಾತುರಕರ್, ಡಿ ವಿ ಕುಲಕರ್ಣಿ, ಡಾ, ಫಾರೂಕ್ ಮಣ್ಣುರ, ಶ್ರೀಮತಿ ಯೆಶೋದಾ ಕಟಕೆ, ಚಂದ್ರಕಾಂತ ಗುರನಂಜಿ, ಮಣ್ಣುರ್,ವಿನಾಯಕ್ ಕೊಡ್ಲಾ, ಶರಣಗೌಡ ಪೊಲೀಸಪಾಟೀಲ್, ರಾಘವೇಂದ್ರ ಕುಲಕರ್ಣಿ.ಸೇರಿದಂತೆ ಅನೇಕರು ಭಾಗವಹಿಸಿದ್ದರು.

Contact Your\'s Advertisement; 9902492681

 

ಈ ಚಿತ್ರವನ್ನು ನಿರ್ಮಿಸಿದ ಕಾರ್ತೀಕ ಕುಲಕರ್ಣಿ ಅವರಿಗೆ ಆಶೀರ್ವದಿಸಿ ಮಾತನಾಡಿದ ಗುಂಡಾಚಾರ್ಯ ನರಿಬೊಳ ಅತ್ಯಂತ ಚಿಕ್ಕವಯಸ್ಸಿನಲ್ಲಿ ಚಿತ್ರವನ್ನು ನಟಿಸಿ ನಿರ್ಮಿಸಿ ಉತ್ತಮವಾದ ಕಾರ್ಯವನ್ನು ಮಾಡಿದ್ದು ದೇವರಲ್ಲಿ ಭಕ್ತಿಯ ಬಗ್ಗೆ ತಿಳಿಸಿದ್ದಾರೆ. ವೈದ್ಯರ ಪ್ರಯತ್ನದ ಜೊತೆ ದೇವರ ಆಶೀರ್ವಾದವು ಬೇಕೇಬೇಕು ಅನ್ನುವದನ್ನು ತೋರಿಸಿದ್ದಾರೆ. ಕಾರ್ತೀಕ ಕುಲಕರ್ಣಿ ಇನ್ನು ಉತ್ತರೋತ್ತರ ಬೆಳೆಯಲಿ, ನಮ್ಮ ಕಲಬುರಗಿಯ ಕೀರ್ತಿ ಬೆಳಗಲಿ ಎಂದು ಹರಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here