1962ರಲ್ಲಿ ಚೈನಾ ವಾರ್ ಸಂದರ್ಭದಲ್ಲಿ ಬೂಟ್ ಪಾಲಿಶ್ ಮಾಡಿ ರಕ್ಷಣಾ ನಿಧಿಗೆ ಹಣ ನೀಡಿದ ವ್ಯಕ್ತಿಗಳಿಗೆ ಇಲ್ಲ ಸರಕಾರದ ಆಸರೆ..!?

0
174
  • ಸಾಜಿದ್ ಅಲಿ

ಕಲಬುರಗಿ:  ಭಾರತದ ಮೇಲೆ 1962ರಲ್ಲಿ ಚೈನಾ ವಾರ್ ನಡೆದ ಸಂದರ್ಭದಲ್ಲಿ ಕಲಬುರಗಿ ಜಿಲ್ಲೆಯ ಇಬ್ಬರು ವಿದ್ಯಾವಂತ ನಾಯಕರು 1962ರಲ್ಲಿ ಬೂಟ್ ಪಾಲಿಶ್ ಮಾಡಿ ಭಾರತ ಸರಕಾರದ ಸೈನಿಕರ ನಿಧಿಗೆ ಹಣ ನೀಡಿ ಸಹಕರಿಸಿದರು. ಈ ಇಬ್ಬರು ನಾಯಕರು ಕಲಬುರಗಿ ನಗರದ ನಿವಾಸಿಗಳೆಂದು ಹೇಳಿಕೊಳ್ಳಲು ಹೆಮ್ಮೆಯ ವಿಷಯ, ಆದರೆ ಇವರಿಗೆ ಸರಕಾರದ ಸೌಲಭ್ಯ ಅಥವಾ ಗೌರವ, ಸನ್ಮಾನ ಏನಾದರು ಸಿಕ್ಕಿದಿಯಾ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಎದ್ದು ಕಾಣುತಿದೆ.

ಅಂದಿನ ಪ್ರಜಾವಣಿ ಪತ್ರಿಕೆಯಲ್ಲಿ ಪ್ರಕಟವಾದ ವರದಿ

Contact Your\'s Advertisement; 9902492681

ಕಲಬುರಗಿ ನಗರದ ಸುಪರ ಮಾರ್ಕೆಟ್ ಬಡಾವಣೆಯ ಬಾವಿಗಲ್ಲಿ ನಿವಾಸಿ ರುಕ್ಕಪ್ಪ ಹಾಗೂ ಬಾರೆಹಿಲ್ಸ್ ಗಣೇಶ್ ನಗರದ ರಾವುಫ್ ಎಂಬ ಇಬ್ಬರು ಧೀಮಂತ ನಾಯಕರು. ಅಂದು ಈ ಇಬ್ಬರು ನಾಯಕರು ಕಲಬುರಗಿ ಜಿಲ್ಲೆಯ ಹೆಮ್ಮೆ ಪಡುವಂತೆ ಕಾರ್ಯ ಮಾಡುವ ಮೂಲಕ ಮೆಚ್ಚುಗೆ ಪಾತ್ರರಾಗಿದರು. ತಮ್ಮ ಕೈಯಲ್ಲಿದ್ದಾಷ್ಟು ದುಡಿದು ದೇಶದ ರಕ್ಷಣೆಗಾಗಿ ತಮ್ಮ ದಿಟ್ಟತನ ಪ್ರದರ್ಶಿ ಆರ್ಥಿಕವಾಗಿ ಸಹಾಯ ಮಾಡಿದ್ದಾರೆನ್ನವುದರಲ್ಲಿ ತಪ್ಪೇನು ಇಲ್ಲ.

ಅಂದು ತಮ್ಮ ಮರ್ಯಾದೆ ಲೆಕ್ಕಿಸದೆ ಬೂಟ್ ಪಾಲಿಶ್  ಮಾಡಿ ದೇಶದ ರಕ್ಷಣಾ ನಿಧಿಗೆ ಆಗಿನ ಜಿಲ್ಲಾಧಿಕಾರಿಗಳಿಗ ನಿಧಿಗೆ ಒಟ್ಟು ರೂ. 184.59 ಸ.ಸೈ ನೀಡಿ ದೇಶ ಪ್ರೇಮ ಮೆರೆದಿದ್ದರು.

ಅಂದಿನ ಕಮಿಶನರ್ ಅವರುಗೆ ಹಣ ನೀಡಿ ಪಡೆದ ರಶೀದಿ

ಇಬ್ಬರು ನಾಯಕರು ಸತತವಾಗಿ ದಿನಾಂಕ: 09-10-1962 ರಿಂದ 12-10-1962ರ ವರೆಗೆ ನಾಲ್ಕು ದಿನ ಬೂಟ್ ಪಾಲಿಶ್ ಮಾಡಿ, ರುಕ್ಕಪ್ಪ ಎಂಬವರು ರೂ. 116-70ಪೈ ಹಣವನ್ನು ಹಾಗೂ ರಾವುಫ  ಅವರು  67-71ನ. ಪೈ ಹಣವನ್ನು ಹೀಗೆ ಒಟ್ಟು 184-59 ಪೈಸೆ, ಹಣವನ್ನು ಸಂಗ್ರಹಿಸಿದರು.  ಕಮೀಷನರ್ ರ ಹತ್ತಿರ ಜಮಾ ಮಾಡಿದರು.

ಚಿತ್ರದಲ್ಲಿ ಬಲಗಡೆ ಇದ್ದವರು ಶ್ರೀ ರುಕ್ಕಪ್ಪ ಇದ್ದು, ರಾವುಫ ಎಂಬುವರನ್ನು ಎಡಗಡೆ ಕಾಣಬಹುದು.

ಈ ಇಬ್ಬರ ನಾಯಕರ ದೇಶ ಪ್ರೇಮ ಮೆಚ್ಚಿದ ದಕ್ಷಿಣ ಮತ ಕ್ಷೇತ್ರದ ಶಾಸಕ ದತ್ತಾತ್ರೇಯ ಸಿ ಪಾಟೀಲ ರೇವೂರ ಅವರು ಜಿಲ್ಲಾಧಿಕಾರಿಗೆ ಪತ್ರ ಬರೆದು ಸನ್ಮಾನ ಹಾಗೂ ಸರಕಾರದ ಸೌಲಭ್ಯಕ್ಕಾಗಿ ಒತ್ತಾಯಿಸಿದ್ದು ಶಾಸಕರ ಮನವಿಗೆ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ ಎಂದು ರುಕ್ಕಪ್ಪ ಅವರು ಅಸಮಾಧಾನ ವ್ಯಕ್ತಪಡಿಸಿದರು.

ದೇಶದ ರಕ್ಷಣೆಗಾಗಿ ಕಷ್ಟಗಳು ಬಂದರೂ ನಾವು ಅನುಭವಿಸಲು ಸಿದ್ಧರಾಗಿದ್ದೇವು, ಅಂದು ನಾವು ಮಾಡಿದ ಸಣ್ಣ ಕೆಲಸ ಭಾರಿ ಪ್ರಸಂಸೆ ಮತ್ತು ಮೆಚ್ಚುಗೆ ವ್ಯಕ್ತವಾಗಿತ್ತು .

– ರುಕ್ಕಪ್ಪ, 1962ರಲ್ಲಿ ದೇಶಕ್ಕಾಗಿ ದೆಣಿಗೆ ನೀಡಿದ ದೇಶ ಪ್ರೇಮಿ.

ಸರಕಾರಗಳು ಇವರ ದೇಶ ಪ್ರೇಮ ಗಣನೆಗೆ ತೆಗೆದುಕೊಳದಿರುವ ಬಗ್ಗೆ ಬೇಸರ ರುಕ್ಕಪ್ಪ ಅವರ ಮುಖದಲ್ಲಿ ಕಂಡುಬರುತ್ತಿತ್ತು. 1962ಯಲ್ಲಿ ಪ್ರಜಾವಣಿ ದಿನ ಪತ್ರಿಕೆಯಲ್ಲಿ ಪ್ರಕಟವಾದ ವರದಿನೇ ಆಸರೆಯಾಗಿದ್ದು ಮತ್ತು ಅಂದು ದೇಶಕ್ಕಾಗಿ ಬೂಟ್ ಪಾಲಿಶ್ ಮಾಡುತ್ತಿದ ಫೋಟೋ ಹಾಗೂ ಪ್ರಕಟವಾದ ವರದಿನೇ ಸನ್ಮಾನ ಎಂದು ಭಾವಿಸಿ ಜೋಪಾನವಾಗಿ ಇಟ್ಟುಕೊಂಡು ತಮ್ಮ ದೇಶಪ್ರೇಮವನ್ನು ಸ್ಮೀರಿಸಿಕೊಳ್ಳುವ ಮೂಲಕ ಜೀವನ ಸಾಗಿಸುತ್ತಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here