ಕಲಬುರಗಿ: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಗಂಧದಗುಡಿ ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ಡಾ. ರಾಜಕುಮಾರ ಹಾಗೂ ಪುನೀತ್ ರಾಜಕುಮಾರ ಅಭಿಮಾನಿಗಳ ಸಂಘದ ವತಿಯಿಂದ ಗುರುವಾರ ನಗರದಲ್ಲಿ ಪುನೀತ್ ರಾಜಕುಮಾರ ಅವರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಸಲಾಯಿತು.
ಪುನಿತ್ ರಾಜಕುಮಾರರನ್ನು ವಿವಿಧ ದೇವರುಗಳ ರೂಪದಲ್ಲಿ ಸೃಷ್ಟಿಸಿ ಸಂಭ್ರಮಿಸಿದ ಅಭಿಮಾನಿಗಳು, ದೇವತಾ ಮನುಷ್ಯ ಪುನೀತ್ ರಾಜಕುಮಾರ್ ಎನ್ನುವುದನ್ನು ಬಿಂಬಿಸಲು ದೇವತೆಗಳ ರೂಪ ಕೊಟ್ಟು ಪುನಿತ್ ರಾಜಕುಮಾರಗೆ ಬ್ರಹ್ಮ ವಿಷ್ಣು ಮಹೇಶ್ವರ ರೂಪ ಕೊಟ್ಟು ಸಂಭ್ರಮಿಸಿದರು.
ಪುನೀತ್ ರಾಜಕುಮಾರ್ ಭಾವಚಿತ್ರಕ್ಕೆ ಕ್ಷೀರಾಭಿಷೇಕ ಮಾಡಿದರು. ಜೆಸಿಬಿ ಮೂಲಕ ಪುನೀತ್ ರಾಜಕುಮಾರ್ ಭಾವಚಿತ್ರಕ್ಕೆ ಪುμÁ್ಪಂಜಲಿ ಅರ್ಪಿಸಿದರು. ನಗರದ ಸರ್ದಾರ ವಲ್ಲಭಬಾಯಿ ಪಟೇಲ್ ವೃತ್ತದಿಂದ ಸೂಪರ್ ಮಾರ್ಕೆಟ್ನಲ್ಲಿರುವ ಸಂಗಮ ಚಿತ್ರಮಂದಿರದವರೆಗೆ ಭವ್ಯ ಮೆರವಣಿಗೆ ನಡೆಸಿದರು. ನೂರಾರು ಯುವಕರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ನಿರಗುಡಿ ಹವಾ ಮಲ್ಲಯ್ಯ ಮುತ್ಯಾ, ಶರಣು ಗದ್ದುಗೆ, ಎಂ.ಎಸ್. ಪಾಟೀಲ ನರಿಬೋಳ, ಹಣಮಂತ ಯಳಸಂಗಿ, ವೈಜನಾಥ ಜಳಕಿ, ರಾಘವೇಂದ್ರ ಕುಲಕರ್ಣಿ ಇತರರಿದ್ದರು.
ನಾನು ಮೂಲತಃ ಡಾ. ರಾಜಕುಮಾರ ಅಭಿಮಾನಿ. ಅವರ ಪುತ್ರ ಪುನೀತ್ ರಾಜಕುಮಾರ್ ಅವರ ಅಭಿಮಾನಿ ಕೂಡ. ಅವರ ಸಾವು ಅತೀವ ನೋವು ಉಂಟು ಮಾಡಿದೆ. ಮುಂದಿನ ದಿನಗಳಲ್ಲಿ ನನ್ನ ಸ್ವಂತ ಜಾಗದಲ್ಲಿ ಪುನೀತ್ ರಾಜಕುಮಾರ್ ದೇವಾಲಯ ನಿರ್ಮಿಸುವೆ. – ರಾಘವೇಂದ್ರ ಕುಲಕರ್ಣಿ, ಪುನೀತ್ ರಾಜಕುಮಾರ ಅಭಿಮಾನಿ.