ಕಲಬುರಗಿ: ನಗರದ ಗುಬ್ಬಿ ಕಾಲೋನಿಯಲ್ಲಿ ನೂತನ ಧನ್ವಂತರಿ ಜಾನಪದ(ನಾಟಿ) ಆಯುರ್ವೇದ ಹಾಗೂ ಪಂಚಕರ್ಮ ಚಿಕಿತ್ಸಾಲಯವನ್ನು ಮಳಖೇಡನ ಹಜರತ್ ಸೈಯದ್ ಮುಸ್ತಾಫಾ ಬಾಬಾ ಖಾದ್ರಿ ಸಜ್ಜದೆ ನಶಿನ್ ಅವರು ರಿಬ್ಬನ್ ಕತರಿಸುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಹರ್ಷಾನಂದ ಎಸ್. ಗುತ್ತೇದಾರ, ಮಾಪಣ್ಣ. ಎಸ್. ಗಂಜಗಿರಿ, ಕಲ್ಯಾಣ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಸಿದ್ರಾಮ ಮಾಡ್ಯಾಳಕರ್, ಕಾರ್ಯದರ್ಶಿ ರಮೇಶ್ ಗಂಜಿ, ಸಹಕಾರ್ಯದರ್ಶಿ ಬಸವರಾಜ ದೇಗಲಮಡಿ ಹಾಗೂ ತಾಲೂಕು ಅಧ್ಯಕ್ಷ ಈರಣ್ಣ ರಾಂಪುರೆ, ವೈದ್ಯ ನಾಗವೇಣಿ ಎ. ಬಿರಾದಾರ ಹಾಗೂ ಸಿಬ್ಬಂದಿವರ್ಗದವರು ಇದ್ದರು.