ಅಕಾಡೆಮಿ ವತಿಯಿಂದ ಅರ್ಥಪೂರ್ಣ ‘ಬಸವ ಪಂಚಮಿ’ ಆಚರಣೆ: ‘ಹಾಲು’ ಮಣ್ಣು ಪಾಲು ಮಾಡಬೇಡಿ

0
86

ಕಲಬುರಗಿ: ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ವತಿಯಿಂದ ಕಲಬುರಗಿಯ ಗೋದುತಾಯಿ ನಗರದಲ್ಲಿನ ಸೋ ಕೇರ್ ಇಂಡ್ ಮಕ್ಕಳ ಮನೆಯ ಬಡ-ನಿರ್ಗತಿಕ ಮಕ್ಕಳಿಗೆ ಪೌಷ್ಟಿಕಾಂಶವುಳ್ಳ ಹಾಲು ಮತ್ತು ಹಣ್ಣು ಕೊಡುವ ಮೂಲಕ ಅರ್ಥಪೂರ್ಣ ಬಸವ ಪಂಚಮಿಯನ್ನು ಸೋಮವಾರ ಆಚರಿಸಲಾಯಿತ್ತು.

ಸಾನಿಧ್ಯ ವಹಿಸಿದ್ದ ಸಾರಂಗಮಠದ ಜಗದ್ಗುರು ಪೂಜ್ಯ ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ಮಾತನಾಡಿ, ಅತ್ಯಂತ ಸಮೃದ್ಧವಾದ ಆಹಾರ ಹಾಲು. ಇಂಥ ಹಾಲನ್ನು ಕಲ್ಲಿನ ಮೇಲೆ ಸುರಿದು ಮಣ್ಣುಪಾಲು ಮಾಡುವ ಬದಲಾಗಿ, ಬಡ ಅಥವಾ ನಿರ್ಗತಿಕ ಮಕ್ಕಳಿಗೆ ನೀಡುವ ಮೂಲಕ ಪರೋಪಕಾರವನ್ನು ಮೆರೆಯಬೇಕೆಂದರು.

Contact Your\'s Advertisement; 9902492681

ರಾಷ್ಟ್ರೀಯ ಬಸವ ದಳದ ಜಗದೇವಿ ಚೆಟ್ಟಿ ಮಾತನಾಡಿ, ಹಬ್ಬ-ಹರಿದಿನಗಳ ಆಚರಣೆಯಲ್ಲಿ ಹೆಣ್ಣು ಮಕ್ಕಳೇ ಹೆಚ್ಚಾಗಿ ವಿಶೇಷ ಆಸಕ್ತಿ ಮತ್ತು ಪ್ರಮುಖ ಪಾತ್ರ ವಹಿಸುತ್ತಾರೆ. ಹಾಗಾಗಿ, ಅವರು ಇಂಥ ಆಚರಣೆಗಳ ಕುರಿತು ವೈಚಾರಿಕವಾಗಿ ಆಲೋಚಿಸಿದರೆ ಒಂದು ಕುಟುಂಬ ಹಾಗೂ ಸಮಾಜ ಪರಿವರ್ತನೆಗೆ ನಾಂದಿಯಾಗುತ್ತದೆ ಎಂದು ಮಾರ್ಮಿಕವಾಗಿ ಹೇಳಿದರು.

ಆಶಯ ನುಡಿಗಳನ್ನಾಡಿದ ಅಕಾಡೆಮಿ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಹಬ್ಬದ ಆಚರಣೆಯನ್ನು ವಿರೋಧಿಸುವುದು ಕಾರ್ಯಕ್ರಮದ ಉದ್ದೇಶವಲ್ಲ. ಕುಟುಂಬದ ಸದಸ್ಯರು ಒಂದೆಡೆ ಸೇರಿ ಆಚರಿಸುವ  ಹಬ್ಬಗಳು ಪರಸ್ಪರ ಪ್ರೀತಿ-ವಿಶ್ವಾಸಗಳನ್ನು ಇಮ್ಮಡಿಗೊಳಿಸುತ್ತವೆ. ವೈಜ್ಞಾನಿಕ ಮತ್ತು ವೈಚಾರಿಕ ನೆಲೆಗಟ್ಟಿನಲ್ಲಿ  ಶರಣರು ಸಾರಿದ ತಾತ್ವಿಕ ಚಿಂತನೆಗಳನ್ನು ಸಮಾಜಕ್ಕೆ ತಲುಪಿಸುವುದೇ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆವೆಂದರು.

ಸಂಸ್ಥೆ ಕಾರ್ಯದರ್ಶಿ ಪರಮೇಶ್ವರ ವಾಗ್ಧರ್ಗಿ ಅಧ್ಯಕ್ಷತೆ ವಹಿಸಿದ್ದರು. ಪಾಲಿಕೆ ಸದಸ್ಯ ಹುಲಿಗೆಪ್ಪ ಕನಕಗಿರಿ, ಬಸವ ಸೇವಕರಾದ ವಿಜಯಲಕ್ಷ್ಮೀ ಪಾಟೀಲ ಬಿರಾಳ, ಸಂಗೀತಾ ಕಾಡಾದಿ, ಶ್ರೀದೇವಿ ಶಟಕಾರ, ಸೃಷ್ಠಿ ಪಾಟೀಲ ತೇಗಲತಿಪ್ಪಿ, ಪರಮೇಶ್ವರ ಶಟಕಾರ, ರವೀಂದ್ರಕುಮಾರ ಭಂಟನಳ್ಳಿ, ಜಗದೀಶ ಮರಪಳ್ಳಿ, ಸತೀಶ ಸಜ್ಜನ್, ಡಾ.ಕೆ.ಗಿರಿಮಲ್ಲ, ಬಿ.ಎಂ.ಪಾಟೀಲ ಕಲ್ಲೂರ, ಶಿವಶರಣ ಕುಸನೂರ, ಮಹಾಂತೇಶ ಕಲಬುರಗಿ, ಅಯ್ಯಣ್ಣಗೌಡ ಪಾಟೀಲ, ಪ್ರಸನ್ನ ವಾಂಜರಖೇಡೆ, ಶರಣರಾಜ್ ಛಪ್ಪರಬಂದಿ, ನಾಗೇಂದ್ರಪ್ಪ ಮಾಡ್ಯಾಳೆ, ಶಿವಕುಮಾರ ದೊಡ್ಡಮನಿ, ಡಾ.ಗೀತಾ ಪಾಟೀಲ ಸೇರಿ ಅನೇಕ ಗಣ್ಯರು ಭಾಗವಹಿಸಿದ್ದರು…

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here