ಕಾಮುಕರಿಗೆ ಸರಕಾರ ಗಲ್ಲು ಶಿಕ್ಷೆ ನೀಡಬೇಕು

0
11

ಸುರಪುರ: ಜಿಲ್ಲೆಯ ಕೊರಳ್ಳಿ ಗ್ರಾಮದಲ್ಲಿ ಅಪ್ರಾಪ್ತ ಮೇಲೆ ಕೃತ್ಯ ಎಸಗಿ ಕೊಲೆ ಮಾಡಿರುವ ಘಟನೆ ಖಂಡಿಸಿ ಕನ್ನಡ ಸೇನೆ ಕರ್ನಾಟಕ ಸಂಘಟನೆಯಿಂದ ನಗರದ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಗಲ್ಲು ಶಿಕ್ಷೆಗೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಭಾಗವಹಸಿದ್ದ ಸಂಘಟನೆಯ ಈಶಾನ್ಯ ವಲಯ ಸಂಘಟನಾ ಕಾರ್ಯದರ್ಶಿ ದೇವು ಬೀಗುಡಿ ಮಾತನಾಡಿ,ದೇಶದಲ್ಲಿ ಅನೇಕ ಕಡೆಗಳಲ್ಲಿ ನಡೆಯುತ್ತಿರುವ ಹೀನಕೃತ್ಯ ಘಟನೆಗಳು ಮಾನವ ಸಮಾಜ ತಲೆತಗ್ಗಿಸುವಂತಾಗಿದೆ, ಅಂತಹ ಘಟನೆಗಳ ಸಾಲಿಗೆ ಈಗ  ಗ್ರಾಮದಲ್ಲಿ ನಡೆದಿರುವ ಘಟನೆ ಇಡೀ ನಾಡಿನ ಜನರು ತಲೆ ತಗ್ಗಿಸುವಂತಾಗಿದೆ, ಅಪ್ರಾಪ್ತ ಬಾಲಕಿ ಬಹಿರ್ದೇಶೆಗೆ ಹೋದಾಗ ಬಾಲಕಿಯನ್ನು ಹೊತ್ತೋಯ್ದು ಹೀನ ಕೃತ್ಯ ಎಸಗಿರುವುದು ಅತ್ಯಂತ ಹೇಯ ಕೃತ್ಯವಾಗಿದೆ.

Contact Your\'s Advertisement; 9902492681

ಒಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿರುವುದಾಗಿ ಹೇಳಲಾಗುತ್ತಿದೆ.ಆದರೆ ಕೇವಲ ಒಬ್ಬನ ಬಂಧಿಸಿದ ಮಾತ್ರಕ್ಕೆ ಸಾಲದು ಕೂಡಲೇ ಘಟನೆಯ ಸಂಪೂರ್ಣ ತನಿಖೆ ನಡೆಸಿ ತಪ್ಪಿತಸ್ಥರನ್ನು ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು.ಒಂದು ವೇಳೆ ನಿರ್ಲಕ್ಷ್ಯ ತೋರಿದಲ್ಲಿ ಕನ್ನಡ ಸೇನೆ ಕರ್ನಾಟಕ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಸಿದರು.

ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ತಹಸೀಲ್ ಕಚೇರಿ ಸಿರಸ್ತೆದಾರರ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಂಘಟನೆಯ ತಾಲೂಕು ಅಧ್ಯಕ್ಷ ಮಲ್ಲು ಹೊಸ್ಮನಿ,ಪ್ರಧಾನ ಕಾರ್ಯದರ್ಶಿ ಭಾಗನಾಥ ನಾಯಕ ಗುತ್ತೇದಾರ,ಪ್ರಭು ನಾಯಕ,ರವಿಚಂದ್ರ ಠಾಣಾಗುಂದಿ,ಹುಸನಪ್ಪ ಜೀವಣಗಿ,ಭಿಮನಗೌಡ ತಳ್ಳಳ್ಳಿ,ದೇವು ಮಾಲಗತ್ತಿ,ವೆಂಕಟೇಶ ಹೆಮ್ಮಡಗಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here