ಗ್ರಾಮ ಪಂಚಾಯಿತಿಗಳಲ್ಲಿ ಕಾನೂನು ಅರಿವು ನೆರವು

0
6

ಸುರಪುರ : ನ್ಯಾಯಾಲಯಗಳಲ್ಲಿನ ಕೆಲವು ಪ್ರಕರಣಗಳು ಇದೇ ತಿಂಗಳು 12 ರಂದು ನ್ಯಾಯಾಲಯದಲ್ಲಿ ನಡೆಯಲಿರುವ ರಾಷ್ಟ್ರೀಯ ಬೃಹತ್ ಲೋಕ್ ಅದಲತ್ತನಲ್ಲಿ ಪ್ರಕರಣಗಳು ಇತ್ಯರ್ಥ ಪಡಿಸಿಕೊಳ್ಳಬಹುದೆಂದು ನ್ಯಾಯವಾದಿಗಳಾದ ಚೆನ್ನಪ್ಪ ಹೂಗಾರ ಹೇಳಿದರು.

ತಾಲೂಕಿನ ಕಚಕನೂರ ಬೈಚಬಾಳ ಗ್ರಾಮ ಪಂಚಾಯತ ಕಾರ್ಯಾಲಯಗಳಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಸುರಪುರ ನ್ಯಾಯವಾದಿಗಳ ಸಂಘ ಸುರಪುರ ಮತ್ತು ಸರ್ಕಾರಿ ವಿವಿಧ ಇಲಾಖೆಗಳ ಸಯೋಗದಲ್ಲಿ ಕಾನೂನು ಅರಿವು ಮೂಡಿಸುವ ಮೂಲಕ ನಾಗರಿಕ ಸಬಲೀಕರಣ ಕಾರ್ಯಕ್ರಮವನ್ನು ಉದ್ದೇಶಿಸಿ ಉಪನ್ಯಾಸಕರಾಗಿ ಮಾತನಾಡಿ, ಇಂದು ಎಲ್ಲರಿಗೂ ಕಾನೂನಿನ ಕುರಿತು ಮಾಹಿತಿ ನೀಡಲೆಂದು ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮ ನಡೆಸಲಾಗುತ್ತಿದ್ದು,ತಾವೆಲ್ಲರು ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಜನ ಸಾಮಾನ್ಯರು ತಿಳಿಯ ಬೇಕಾದ ಕಾನೂನುಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳುವಂತೆ ತಿಳಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗೌಡಪ್ಪಗೌಡ ಚಿಕ್ಕನಳ್ಳಿ ನ್ಯಾಯವಾದಿಗಳಾದ ಸಚಿನ್ , ಮಲ್ಲು ತಳ್ಳಳ್ಳಿ ಮಾತನಾಡಿದರು.ಮುಖಂಡರಾದ ಭೀಮಣ್ಣ ದೊರೆ ದಶರಥ ದೊರಿ ಗ್ರಾಮ ಪಂಚಾಯತ ಕಾರ್ಯದರ್ಶಿ ಯಂಕನಗೌಡ ವೇದಿಕೆ ಮೇಲಿದ್ದರು. ಗ್ರಾಮ ಪಂಚಾಯತ್ ಕರ ವಸೂಲಿಗಾರರಾದ ಯಲ್ಲಪ್ಪ ಅರಕೇರಿ ಸ್ವಾಗತಿಸಿದರು. ಹಣಮಂತ್ರಾಯ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗ್ರಾಮ ಪಂಚಾಯತ ಸದಸ್ಯರು ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here