ಕಲಬುರಗಿ ವಾರ್ಡ್ ಸಮಿತಿ ಬಳಗದ ಸಮಾವೇಶ 20ಕ್ಕೆ

0
24

ಕಲಬುರಗಿ: ಮಹಾನಗರ ಪಾಲಿಕೆಯ ನಗರ ಆಡಳಿತದಲ್ಲಿ ನಾಗರಿಕರ ಪಾಲ್ಗೊಳ್ಳುವಿಕೆಯನ್ನು ಒಳಗೊಂಡಂತೆ ವಾರ್ಡ ಸಮಿತಿಯನ್ನು ಸಾಂಸ್ಥಿಕಗೊಳಿಸಿ ಬಲಪಡಿಸುವ ಉದ್ದೇಶದಿಂದ ಇದೇ ನವೆಂಬರ್ 20 ರಂದು ಭಾನುವಾರ ಬೆಳಿಗ್ಗೆ 10ಗಂಟೆಗೆ ನಗರದ ಜಯ ನಗರದಲ್ಲಿರುವ ಅನುಭವ ಮಂಟಪದಲ್ಲಿ ಕಲಬುರಗಿ ವಾರ್ಡ ಸಮಿತಿ ಬಳಗ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮಹಾನಗರ ಪಾಲಿಕೆಯ ಆಯುಕ್ತರಾದ ಪಾಟೀಲ್ ದೇವಿದಾಸ ಭುವನೇಶ್ ಭಾ.ಆ.ಸೇ, ಬೆಂಗಳೂರಿನ ಜನಾಗ್ರಹ ಸಂಸ್ಥೆಯ ರಾಜ್ಯ ಮುಖ್ಯಸ್ಥರಾದ ಸಂತೋಷ ನರಗುಂದ, ವಿಶೇಷ ಆಹ್ವಾನಿತರಾಗಿ ವಲಯ ಆಯುಕ್ತರಾದ ಕು. ಶ್ರೀಯಾಂಕ ಧನ ಕೆ.ಎ.ಎಸ್ ಹಾಗೂ ಗೌರವ ಅತಿಥಿಗಳಾಗಿ ಡಾ.ಕೆ.ಎಸ್ ವಾಲಿ ಅಧ್ಯಕ್ಷರು, ಗುಲ್ಬರ್ಗ ವಿಶ್ವವಿದ್ಯಾಲಯ ಸ್ನಾತಕೋತ್ತರ ನಿವೃತ್ತ ಶಿಕ್ಷಕರ ಸಂಘ, ಕಾರ್ಯಕ್ರಮದ ಅಧ್ಯಕ್ತೆಯನ್ನು ವಾರ್ಡ ಸಮಿತಿ ಬಳಗದ ಸಂಚಾಲಕರಾದ ಪ್ರಭುಲಿಂಗ ಮಹಾಗಾಂವ್ಕರ್ ವಹಿಸುವರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here