ಕಲಬುರಗಿ: ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಸಚಿವ ಹಾಲಿ ಶಾಸಕ ಪ್ರಿಯಾಂಕ ಖರ್ಗೆ ಹಾಗೂ ಮಾಜಿ ಎಂಎಲ್ಸಿ ಅಲ್ಲಮಪ್ರಭು ಪಾಟೀಲ, ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ ಇವರ ನೇತೃತ್ವದಲ್ಲಿ ದಕ್ಷಿಣ ಮತ ಕ್ಷೇತ್ರದ ಮಹಿಳಾ ಮುಖಂಡರಾದ ಅನೀತಾ ಲಕ್ಷ್ಮೀ, ನಿಲಮ್ಮ, ಮಹಾದೇವಿ, ಭಾರತಿ, ಗಂಗುಬಾಯಿ, ಜಯಶ್ರಿ, ಸೊನಿ, ಅಂಜಲಿ, ವೈಶಾಲಿ, ಶರಣಮ್ಮ, ಕಲಾವತಿ, ರಾಜೇಶ್ವರಿ ಇವರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಮುಖಂಡರಾದ ನೀಲಕಂಠರಾವ ಮೂಲಗೆ, ಸಂತೋಷ ಬಿಲಗುಂದಿ, ಪ್ರವೀಣ ಪಾಟೀಲ ಹರವಾಳ, ಡಾ.ಕಿರಣ ದೇಶಮುಖ, ಸಂತೋಷ ಪಾಟೀಲ, ಲಿಂಗರಾಜ ಕಣ್ಣಿ, ಶಿವಾನಂದ ಹೋನಗುಂಟಿ, ಈರಣ ಝಳಕಿ, ಫಾರುಖ ಮನಿಯಾರ, ವಾಣಿಶ್ರೀ ಸಗರಕರ್, ರಾಜೀವ ಜಾನೆ, ಧರ್ಮರಾಜ ಹೇರೂರ, ಅವಿನಾಶ ಭಾಸ್ಕರ, ಸಿಧಾರ್ಥ ಕೋರವಾರ ಸೇರಿದಂತೆ ಪಕ್ಷದ ಕಾರ್ಯಕರ್ತರು ಭಾಗವಹಿಸಿದರು.