ಸತೀಶ ಜಾರಕಿಹೊಳೆ ಹಿಂದೂ ಪದ ವಿಮರ್ಶೆ ಹೇಳಿಕೆಗೆ ದಲಿತ ಸೇನೆ ಬೆಂಬಲ-ನಿಂಗಣ್ಣ

0
15

ಸುರಪುರ: ಕಳೆದ ಕೆಲ ದಿನಗಳ ಹಿಂದೆ ಪ್ರಗತಿಪರ ಚಿಂತಕರು ಬುದ್ಧ ಬಸವ ಅಂಬೇಡ್ಕರ್‍ರ ಅನುಯಾಯಿ ರಾಜಕಾರಣಿಗಳಾದ ಸತೀಶ ಜಾರಕಿಹೊಳೆ ಅವರು ಹಿಂದೂ ಪದದ ವಿಮರ್ಶೆ ಅಗತ್ಯವಿದೆ ಎಂದು ಹೇಳಿಕೆ ನೀಡಿರುವುದಕ್ಕೆ ದಲಿತ ಸೇನೆ ಸಂಘಟನೆಯೂ ಬೆಂಬಲಿಸುತ್ತದೆ ಎಂದು ದಲಿತ ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಗಣ್ಣ ಗೋನಾಲ ನುಡಿದರು.

ನಗರದ ತಹಸೀಲ್ದಾರ್ ಕಚೇರಿ ಬಳಿಯಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿ,ಸತೀಶ ಜಾರಕಿಹೊಳೆಯವರು ನೀಡಿದ ಹೇಳಿಕೆಯನ್ನು ರಾಜಕೀಯಗೊಳಿಸಿ ಅದನ್ನು ವಿವಾದಗೊಳಿಸಲಾಗಿದೆ,ಅಂತಹ ಹಿಂದೂ ವಿರೋಧಿಗಳ ನಡೆಯನ್ನು ಖಂಡಿಸುತ್ತೇವೆ ಅಲ್ಲದೆ ಸರಕಾರ ಸತೀಶ ಜಾರಕಿಹೊಳೆಯವರ ಹೇಳಿಕೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು,ಹಿಂದೂ ಎನ್ನುವ ಹೆಸರಿನಲ್ಲಿ ಅನೇಕರು ವಿನಾಕಾರಣ ಸಮಾಜದಲ್ಲಿ ಗೊಂದಲ ಹುಟ್ಟಿಸುವ ಕೆಲಸ ಮಾಡುತ್ತಿದ್ದು,ಅಂತಹ ಗೂಂಡಾ ಪ್ರವೃತ್ತಿಯವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಹಿಂದೂ ಎನ್ನುವ ಪದದ ಕುರಿತು ವಿಮರ್ಶೆ ಅಗತ್ಯವಿದ್ದು ಹಿಂದೂ ವಿಶ್ಲೇಷಣೆಯನ್ನು ಮಾಡಿಸುವಂತೆ ಒತ್ತಾಯಿಸಿದರು.

Contact Your\'s Advertisement; 9902492681

ನಂತರ ರಾಜ್ಯಪಾಲರಿಗೆ ಬರೆದ ಮನವಿಯನ್ನು ಗ್ರೇಡ-2 ತಹಸೀಲ್ದಾರ್ ಮಲ್ಲಯ್ಯ ದಂಡು ಅವರ ಮೂಲಕ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಸಂಘಟನೆಯ ವಿದ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷ ಸದಾಶಿವ ಬೊಮ್ಮನಹಳ್ಳಿ,ಮುಖಂಡರಾದ ತಾಯಪ್ಪ ಕನ್ನೆಳ್ಳಿ,ಮೌನೇಶ ಚಿಂಚೋಳಿ,ಸುಭಾಷ ತೇಲ್ಕರ್,ಚಂದ್ರು ಆಲ್ದಾಳ,ನಾಗು ಗೋಗಿಕೇರಾ,ಮಾನಪ್ಪ ಮೂಲಿಮನಿ,ಮಾಂತೇಶ ಬೇವಿನಗಿಡ,ನಿಂಗಣ್ಣ ಹಾದಿಮನಿ,ಸಚೀನ್ ಚಿಂಚೋಳಿ,ದೇವಿಂದ್ರಪ್ಪ ಕನ್ನೆಳ್ಳಿ,ನಿಂಗಣ್ಣ ಕನ್ನೆಳ್ಳಿ,ಸುರೇಶ ಹಾದಿಮನಿ,ಪರಶುರಾಮ ಪರಸನಹಳ್ಳಿ,ಭೀಮಣ್ಣ ಕನ್ನೆಳ್ಳಿ,ಶರಣು ನಗನೂರ,ಚಂದ್ರಶೇಖರ ಕನ್ನೆಳ್ಳಿ,ಗೋಪಾಲಕೃಷ್ಣ ಗೋಗಿಕೇರಾ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here