ಸುರಪುರ:ನಗರದ ರಂಗಂಪೇಟೆಯ ಸ್ವಾಮಿ ವಿವೇಕಾನಂದ ಶಾಲೆ ಬಳಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀರಾಮ ಮಂದಿರ ಕಾಮಗಾರಿಗಾಗಿ ತರಿಸಲಾಗಿರುವ ಕಲ್ಲುಗಳ ಪೂಜೆ ಕಾರ್ಯಕ್ರಮ ನಡೆಸಲಾಯಿತು.
ಸೋಮವಾರ ನಡೆದ ಪೂಜಾ ಕಾರ್ಯಕ್ರಮವನ್ನು ರಾಮಭಟ್ ಜೋಷಿ ನಡೆಸಿಕೊಟ್ಟರು,ಮುಖಂಡರಾದ ಸುಭಾಷ ಬೋಡಾ,ಬಸವರಾಜ ಬೂದಿಹಾಳ,ಸೋಮಶೇಖರ ಶಹಾಬಾದಿ,ರಘುರಾಮ ಕಡಬೂರ,ಶರಣಪ್ಪ ಕಲಕೇರಿ, ರವಿ ತ್ರಿವೇದಿ,ಅಯ್ಯಣ್ಣ,ವಾಸುದೇವ ಓಬಳಶೆಟ್ಟಿ,ಗೋವಿಂದರಾಜ ಶಹಾಪುರಕರ್,ಮೌನೇಶ ನಾಲವಾರ, ಹಣುಮಂತಪ್ಪ ಗೋಗಿ,ಮಾಧುರಿ ಕಲ್ಕೊಂಡ,ಶಿಲ್ಪಾ ಆವಂಟಿ,ರಾಜೇಶ್ವರಿ ಗೋಲಗೇರಿ,ಮಂಜುಳಾ ಬೂದಿಹಾಳ ಸೇರಿದಂತೆ ಅನೇಕರು ಭಾಗವಹಿಸಿದ್ದರು.