ಸಮಯ ಗತಿಸಿದರೆ ಮರಳಿ ಬರುವದಿಲ್ಲ: ಡಾ.ಲಿಂಗರಾಜ ಶಾಸ್ತ್ರಿ

0
42

ಕಲಬುರಗಿ: ಕಳೆದು ಹೋದ ಸಮಯ ಪುನ: ಮರಳಿ ಬರುವದಿಲ್ಲ. ಅದು ಹಿಡಿದಿಟ್ಟುಕೊಳ್ಳಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ಸಮಯಕ್ಕೆ ನಿರ್ಲಕ್ಷ್ಯ ಮಾಡದೇ. ವಿದ್ಯಾರ್ಥಿ ಜೀವನದಲ್ಲಿ ಸಮಯವನ್ನು ಸಮರ್ಥವಾಗಿ ಬಳಸಿಕೊಂಡು ಸಮಾಜಕ್ಕೆ ಮಾದರಿಯಾಗಬೇಕು ಎಂದು ಶರಣಬಸವ ವಿವಿಯ ಮೌಲ್ಯಮಾಪನ ಕುಲಸಚಿವ ಡಾ. ಲಿಂಗರಾಜ ಶಾಸ್ತ್ರಿ ಹೇಳಿದರು.

ನಗರದ ಶರಣಬಸವ ವಿವಿ ಶತಮಾನೋತ್ಸವ ಸಭಾಂಗಣದಲ್ಲ್ಲಿ ಬುಧವಾರ ಆಯೋಜಿಸಿದ್ದ ಇಂಡಕ್ಷನ್ (ದೀಕ್ಷಾರಂಭ-೨೦೧೯) ಕಾರ್ಯಕ್ರಮದಲ್ಲಿ ಸಮಯದ ಮಹತ್ವದ ಬಗ್ಗೆ ಉಪನ್ಯಾಸ ನೀಡಿದರು. ವಿದ್ಯಾರ್ಥಿಗಳು ಅಧ್ಯಯನ ಮಾಡುವ ಸಮಯದಲ್ಲಿ ಸಮಯಕ್ಕೆ ನಿರ್ಲಕ್ಷ್ಯ ಮಾಡಿದರೇ ಅವರ ಭವಿಷ್ಯವೇ ಅತಂತ್ರವಾಗುತ್ತದೆ. ಆದರೆ ಯಾರು ಜಾಣ್ಮೆಯಿಂದ ಸಮಯಕ್ಕೆ ಬೆಲೆಕೊಟ್ಟು, ಕಠಿಣ ಪರಿಶ್ರಮದಿಂದ ಅಧ್ಯಯನ ಮಾಡುತ್ತಾರೋ, ಅಂತಹ ವಿದ್ಯಾರ್ಥಿಗಳು ಉನ್ನತ ಸ್ಥಾನ ಮತ್ತು ಯಶಸ್ವಿ ಜೀವನ ನಡೆಸುವುದಕ್ಕೆ ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಸಮಯದ ಬಗ್ಗೆ ಅರಿವು ಮೂಡಿಸಿದರು.

Contact Your\'s Advertisement; 9902492681

ವಿದ್ಯಾರ್ಥಿಗಳಲ್ಲಿ ದೃಢ ನಿರ್ಧಾರ, ಆತ್ಮ ವಿಶ್ವಾಸ ಸತತ ಪ್ರಯತ್ನ ಕರಗತ ಮಾಡಿಕೊಂಡಾಗ ಮಾತ್ರ ಜ್ಞಾನ ತಮ್ಮದಾಗಿಸಿಕೊಳ್ಳಬಹುದಾಗಿದೆ. ಆದರೆ ಇಂದಿನ ವಿದ್ಯಾರ್ಥಿಗಳು ಕೇವಲ ದೊಡ್ಡ, ದೊಡ್ಡ ಕನಸು ಕಾಣುತ್ತಾರೇ ವಿನಹ: ಅದರ ತಕ್ಕಂತೆ ಕಠಿಣ ಪರಿಶ್ರಮದ ಅಧ್ಯಯನ ಮಾಡುವದಿಲ್ಲ. ಎಂದು ಡಾ.ಲಿಂಗರಾಜ ಶಾಸ್ತ್ರಿ ಬೇಸರ ವ್ಯಕ್ತಪಡಿಸಿದರು.

ಡಾ.ಶಿವರಾಜ ಶಾಸ್ತ್ರಿ ಮಾತನಾಡಿ, ವಿದ್ಯಾರ್ಥಿಗಳು ಗುರುಹಿರಿಯರನ್ನು ಮೊದಲು ಗೌರವಿಸುವುದನ್ನು ಕಲಿಯಬೇಕು. ತಂದೆ ತಾಯಿಯನ್ನು ಪೂಜಿಸಿಬೇಕು. ಸರಸ್ವತಿಯನ್ನು ಆರಾಧಿಸಿ, ಸರಿಯಾದ ಸಮಯಕ್ಕೆ ವಿದ್ಯಾಮಂದಿರದೊಳಗೆ ಬಂದು ಸಂಸ್ಥೆಯ ಮತ್ತು ನಾಡಿನ, ದೇಶದ ರಾಷ್ಟ್ರಗೀತೆ ಹಾಡುವ ಮೂಲಕ ಶಾಲೆಯಲ್ಲಿ ಆಟ, ಮನರಂಜನೆಯ ಜೊತಗೆ ಅಧ್ಯಯನ ಮಾಡಬೇಕು. ಅಂದಾಗ ಮಾತ್ರ ವಿದ್ಯೆ ಅಭ್ಯಾಸಿಗನ ಕೈವಶವಾಗುತ್ತದೆ ಎಂದು ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳು ಬಿತ್ತಿದರು.

ಮುಕ್ತಾಂಬಿಕ ಕಾಲೇಜು ಪ್ರಾಚಾರ್ಯ ಎಮ್.ಆರ್ ಹುಗ್ಗಿ ಮಾತನಾಡಿ, ಮಕ್ಕಳಿಗೆ ಶಿಕ್ಷಣ ನೀಡುವ ಜತೆಗೆ ಮಾನವೀಯ ಮೌಲ್ಯಗಳು ಕಲಿಸಬೇಕು. ದೈಹಿಕ ವ್ಯಾಯಾಮ, ಯೋಗ, ಆಧ್ಯಾ೦೯ತ್ಮಿಕ ಶಿಕ್ಷಣ ನೀಡುವದರಿಂದ ಮಕ್ಕಳ ಬುದ್ದಿಮಟ್ಟ ಬೆಳವಣಿಗೆಯಾಗುವುದಕ್ಕೆ ಪ್ರೇರಣೆ ನೀಡುತ್ತದೆ ಎಂದರು.
ವಿವಿಯ ಸಮ ಕುಲಪತಿ ವಿಡಿ ಮೈತ್ರಿ, ವಿವಿ ಕುಲಸಚಿವ ಡಾ. ಅನೀಲ ಕುಮಾರ ಬಿಡವೆ, ಮೌಲ್ಯಮಾಪನ ಕುಲಸಚಿವ ಡಾ. ಲಿಂಗರಾಜ ಶಾಸ್ತ್ರಿ, ಡೀನ್ ಡಾ.ಲಕ್ಷ್ಮಿ ಮಾಕಾ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here