ಆಳಂದ : ರಾಜ್ಯಸಭಾ ಸದಸ್ಯ ಡಾ.ವೀರೇಂದ್ರ ಹೆಗಡೆ ಹುಟ್ಟು ಹಬ್ಬ ಆಚರಣೆ

0
55

ಆಳಂದ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ವತಿಯಿಂದ ಶುಕ್ರವಾರ ತಾಲ್ಲೂಕಿನ ವಿವಿಧೆಡೆ ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ರಾಜ್ಯಸಭಾ ಸದಸ್ಯ ಡಾ.ವೀರೇಂದ್ರ ಹೆಗಡೆ ಅವರ ಹುಟ್ಟು ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಿದರು.

ಪಟ್ಟಣದ ಸುಲ್ತಾನ್ ಪುರ್ ಬಡಾವಣೆ ಅಂಗನವಾಡಿ ಕೇಂದ್ರದಲ್ಲಿ ಮುದ್ದಾದ ಮಕ್ಕಳೊಂದಿಗೆ ಕೇಕ್ ಕತ್ತರಿಸಿ,ಹುಟ್ಟು ಹಬ್ಬವನ್ನು ಆಚರಿಸಲಾಯಿತು.

Contact Your\'s Advertisement; 9902492681

ಬಳಿಕ ಪಟ್ಟಣದ ನಗರೇಶ್ವರ ರಾಮ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಯೋಜನಾಧಿಕಾರಿ ಕೃಷ್ಣಪ್ಪ ಮಾತನಾಡಿ, ಪೂಜ್ಯರ ಆರೋಗ್ಯ ಆಯುಷ್ಯ ಇನ್ನಷ್ಟು ಕರುಣಿಸಲಿ, ದೇಶದಲ್ಲಿ ವಿವಿಧ ಯೋಜನೆಗಳು ಜಾರಿ ಮಾಡಿ, ಇನ್ನಷ್ಟು ಹೆಚ್ಚಾಗಿ ಸೇವೆ ಸಲ್ಲಿಸಲಿ ಎಂದು ಹಾರೈಸಿದರು.

ಮೇಲ್ವಿಚಾರಕಿ ಅನಿತಾ, ಸಮನ್ವಯ ಅಧಿಕಾರಿ ಚನ್ನಮ್ಮ , ಸೇವಾ ಪ್ರತಿನಿಧಿ ಸಿದ್ದಮ್ಮ, ರೇಖಾ, ಉಮೇಶ್ ಅಂಗನವಾಡಿ ಶಿಕ್ಷಕಿ ಜಗದೇವಿ ಬಿ ಘಂಟೆ,ಮತ್ತಿತರರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here