ಒಬ್ಬ ಸಾಧಕನಿಗೆ ಸಹೋದರ ದಯಾನಂದ ಮಾದರಿಯಾಗಿದ್ದಾರೆ

0
13

ಸುರಪುರ:ನಗರದ ನರಸಿಂಗಪೇಟದಲ್ಲಿ ದ್ರಿಷಿಕಾ ಬಿ ಮುಧೋಳ ಅವರ ಜನ್ಮ ದಿನಾಚರಣೆ ಅಂಗವಾಗಿ ದೇವಾಪುರದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ,ಗುಳಬಾಳದ ಮರಿಹುಚ್ಚೇಶ್ವರ ಸ್ವಾಮೀಜಿ ಹಾಗೂ ಕರಡಕಲ್‍ನ ಶಾಂತ ರುದ್ರಮುನಿ ಸ್ವಾಮೀಜಿಗಳ ಸಾನಿಧ್ಯದಲ್ಲಿ ವಿವಿಧ ಸಾಧಕರಿಗೆ ಸನ್ಮಾನ ಸಮಾರಂಭ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಶಾಸಕ ನರಸಿಂಹ ನಾಯಕ (ರಾಜುಗೌಡ) ಭಾಗವಹಿಸಿ ಮಾತನಾಡಿ,ಇಂದು ಅನೇಕರು ತಮ್ಮ ಜನುಮ ದಿನವನ್ನು ಆಡಂಭರದಿಂದ ಆಚರಿಸುವವರು ಇದ್ದಾರೆ,ಆದರೆ ಜನ್ಮ ದಿನಾಚರಣೆ ಎನ್ನುವುದು ಕೇವಲ ನೆಪವಾಗಿಸಿಕೊಂಡು ವಿವಿಧ ರಂಗಗಳಲ್ಲಿನ ಸಾಧಕರಿಗೆ ಗೌರವಿಸುವ ಮೂಲಕ ಅರ್ಥಪೂರ್ಣವಾಗಿ ಇಂದು ಮುಧೋಳ ಪರಿವಾರ ಜನ್ಮ ದಿನಾಚರಣೆ ಮಾಡುತ್ತಿರುವುದು ಸಂತೋಷದ ಸಂಗತಿಯಾಗಿದೆ ಎಂದರು.

Contact Your\'s Advertisement; 9902492681

ಇಂದು ಬೆಂಗಳೂರಂತ ನಗರದಲ್ಲಿ ಕೇವಲ ಕೆಲಸ ಅರಸಿ ಹೋಗಿ ಇಂದು ಸುಮಾರ 18 ಸಾವಿರ ಮನೆಗಳನ್ನು ನಿರ್ಮಿಸುವ ಮೂಲಕ ಮದ್ಯಮ ವರ್ಗದ ಜನರಿಗೆ ಮನೆಯ ಕನಸನ್ನು ನನಸು ಮಾಡುವ ಮೂಲಕ ಇಂದು ಎಲ್ಲರಿಗೂ ಸಹೋದರ ಡಿಎಸ್ ಮ್ಯಾಕ್ಸ್‍ನ ನಿರ್ದೇಶಕರಾದ ಸಹೋದ ಎಸ್.ಪಿ ದಯಾನಂದ ಇಂದಿನ ಎಲ್ಲ ಸಾಧಕರಿಗೆ ಮಾದರಿಯಾಗಿದ್ದಾರೆ ಎಂದರು.ಕೋವಿಡ್ ಸಂದರ್ಭದಲ್ಲಿ ಎಲ್ಲರು ತಮ್ಮ ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ ಕೈಬಿಟ್ಟರೆ ದಯಾನಂದ ಅವರು ಸುಮಾರು 30 ಸಾವಿರ ಜನರಿಗೆ ಕೋವಿಡ್ ಸಂದರ್ಭದಲ್ಲಿ ನೆವಾಗುವ ಮೂಲಕ ನಾಡು,ದೇಶ ಮಾತ್ರವಲ್ಲದೆ ಜಗತ್ತಿಗೆ ಮಾದಿಯಾಗಿದ್ದಾರೆ ಎಂದರು.

ಡಿಎಸ್ ಮ್ಯಾಕ್ಸ್ ನಿರ್ದೇಶಕ ಎಸ್.ಪಿ ದಯಾನಂದ ಅವರು ಮಾತನಾಡಿ,ನನ್ನ ಸಹೋದರ ಬಸವರಾಜ ತನ್ನ ಸುಪುತ್ರಿಯ ಜನ್ಮ ದಿನವನ್ನು ಸರಳವಾಗಿ ಆಚರಣೆ ಮಾಡುತ್ತಾನೆ ಎಂದು ಭಾವಿಸಿದ್ದೆ,ಆದರೆ ಇಂದು ವಿವಿಧ ರಂಗದಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನಿಸಿ ಗೌರವಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾನೆ ಎಂದರು.ಅಲ್ಲದೆ ಇಂದು ನಾವು ಏನು ಸಾಧನೆ ಮಾಡಿಲ್ಲ ಸೇವೆ ಎಂದು ಭಾವಿಸಿ ಸಾಧ್ಯವಾದ ಮಟ್ಟಿಗೆ ನೆರವಾಗುತ್ತಿದ್ದೆವೆ,ಮುಂದೆಯೂ ನಮ್ಮ ಭಾಗದ ಜನರ ಅಭಿವೃಧ್ಧಿಗಾಗಿ ಅನೇಕ ಕಾರ್ಯಗಳನ್ನು ಮಾಡುವ ಯೋಜನೆ ಹೊಂದಲಾಗಿದೆ.ಅದಕ್ಕೆ ನಮ್ಮ ಭಾಗದ ಜನರು ಸದಾ ನೆರವಾಗುವಂತೆ ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ರಾಜನಕೊಳೂರಿನ ಮೊರಾರ್ಜಿದೇಸಾಯಿ ವಸತಿ ಶಾಲೆ ಮಕ್ಕಳು ಕಬಡ್ಡಿ ಕ್ರೀಡೆಯಲ್ಲಿ ರಾಜ್ಯ ಮಟ್ಟದಲ್ಲಿ ತೃತಿಯ ಸ್ಥಾನ ಪಡೆದಿದ್ದರಿಂದ ಸನ್ಮಾನಿಸಲಾಯಿತು.ಅದರಂತೆ ಹತ್ತನೆ ತರಗತಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ,ಭಾರತೀಯ ಸೇನೆಯ ಯೋಧ ರಂಗಪ್ಪ ಕವಲಿಗೆ,ಪತ್ರಕರ್ತರಿಗೆ ಸನ್ಮಾನಿಸಿ ಗೌರವಿಸಲಾಯಿತು.ಅಲ್ಲದೆ ಜ್ಞಾನೋದಯ ಹಾಗೂ ನರಸಿಂಗಪೇಟ ಶಾಲೆಯ ಮಕ್ಕಳಿಗೆ ಬ್ಯಾಗ್ ಸೇರಿದಂತೆ ವಿವಿಧ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದ ವೇದಿಕೆ ಮೇಲೆ ಮಾಜಿ ಜಿ.ಪಂ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ (ತಾತಾ),ಡಿವೈಎಸ್ಪಿ ಡಾ:ಮಂಜುನಾಥ ಟಿ,ಟಿಹೆಚ್‍ಓ ಡಾ:ಆರ್.ವಿ ನಾಯಕ,ನಮ್ಮ ಕರ್ನಾಟಕ ಸೇನೆ ರಾಜ್ಯಾಧ್ಯಕ್ಷ ಬಸವರಾಜ ಪಡಕೋಟೆ,ಮಲ್ಲಿಕಾರ್ಜುನ ಸಾಹು ಮುಧೋಳ,ಬಸವರಾಜ ಮುಧೋಳ,ಸೇರಿದಂತೆ ಅನೇಕ ಮುಖಂಡರು ವೇದಿಕೆ ಮೇಲಿದ್ದರು.ಅಮರಯ್ಯಸ್ವಾಮಿ ಜಾಲಿಬೆಂಚಿ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here