ನಾಡು ನುಡಿಗಾಗಿ ಸದಾಕಾಲ ಹೋರಾಟಕ್ಕೆ ಸೇನೆ ಸಿದ್ಧ

0
101

ಸುರಪುರ:ನಾನು ಕಳೆದ ಎರಡು ದಶಕಗಳಿಗು ಹೆಚ್ಚು ಕಾಲದಿಂದ ಹೋರಾಟ ಮಾಡಿಕೊಂಡು ಬರುತ್ತಿದ್ದು ಈಗ ನಮ್ಮ ಕರ್ನಾಟಕನ ಸೇನೆ ಸಂಘಟನೆ ಹುಟ್ಟು ಹಾಕಿದ್ದು ನಾಡು ನುಡಿಗಾಗಿ ಸದಾಕಾಲ ನಮ್ಮ ಕರ್ನಾಟಕ ಸೇನೆ ಹೋರಾಟಕ್ಕೆ ಸಿದ್ಧವಾಗಿದೆ ಎಂದು ನಮ್ಮ ಕರ್ನಾಟಕ ಸೇನೆ ರಾಜ್ಯಾಧ್ಯಕ್ಷ ಬಸವರಾಜ ಎಮ್ ಪಡಕೋಟೆ ಮಾತನಾಡಿದರು.

ನಗರದ ಟೈಲರ್ ಮಂಜಿಲ್‍ನಲ್ಲಿ ಸಂಘಟನೆಯ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳ ನೇಮಕಕ್ಕೆ ನಡೆದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ,ನಾನು ಸುರಪುರ ಶೂರರ ನಾಡಿನಿಂದ ಬಂದವನು ಇಲ್ಲಿಯ ರಾಜರು ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಶೂರ ಸಾಹಸ ನನಗೆ ಸ್ಪೂರ್ಥಿಯಿದೆ.ಇಲ್ಲಿಯ ಅರಸರ ಸ್ಪೂರ್ಥಿಯಿಂದಲೇ ನಮ್ಮ ಕರ್ನಾಟಕ ಸೇನೆ ಹೋರಾಟಕ್ಕೆ ದಿಟ್ಟತನವನ್ನು ತೋರಲಿದೆ.ನಾನು ಮರಾಠಿಗನಾದರು,ಮಾತೃ ಭಾಷೆ ಮರಾಠಿಯಾಗಿದ್ದರು ನನ್ನ ಧರ್ಮ ಜಾತಿ ದೇವರು ಎಲ್ಲವೂ ಕನ್ನಡ ಎಂದು ಆರಾಧಿಸುತ್ತೇನೆ.ಇಂದು ನಮ್ಮ ಸೇನೆಯ ಎಲ್ಲಾ ಪದಾಧಿಕಾರಿಗಳು ಹಾಗೂ ಮುಖಂಡರಿಗೂ ಇದೇ ಭೋದನೆಯನ್ನು ಮಾಡುತ್ತೇವೆ.ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗಲಿದೆ ಎನ್ನುವುದು ನಮ್ಮ ದ್ಯೇಯವಾಕ್ಯವಾಗಿದೆ ಎಂದರು.

Contact Your\'s Advertisement; 9902492681

ಇಂದು ನಮ್ಮ ಸಂಘಟನೆಯ ಮೂಲಕ ಬೆಂಗಳೂರಿನಲ್ಲಿ ನಮ್ಮ ಭಾಗದ ಯಾರೇ ವಿದ್ಯಾವಂತರು ಓದು ಮತ್ತು ಕೆಲಸಕ್ಕಾಗಿ ಸಂಘಟನೆಯ ಬಳಿ ಬಂದಲ್ಲಿ ಅವರಿಗೆ ಎಲ್ಲಾ ರೀತಿಯ ಸಹಕಾರ ಸಂಘಟನೆ ನೀಡಲಿದೆ.ಇಲ್ಲಿ ವಿದ್ಯಾವಂತ ಯುವಕರಿಗೆ ಉತ್ತಮವಾದ ಹುದ್ದೆಯನ್ನು ಹೊಂದಲು ಸೇನೆಯಿಂದ ತರಬೇತಿಯನ್ನು ಕೊಡಿಸಿ ಅವರಿಗೆ ಉದ್ಯೋಗ ಕೊಡಿಸಲೆಂದೆ ನಮ್ಮಲ್ಲಿ ಒಂದು ತಂಡವನ್ನು ರಚಿಸಲಾಗಿದೆ ಎಂದು ತಿಳಿಸಿದರು.ಇಂದು ಸುರಪುರ ತಾಲೂಕು ಘಟಕ ರಚನೆ ಮಾಡುತ್ತಿದ್ದು ತಾವೆಲ್ಲರು ನಾಡು ನುಡಿ ನೆಲ ಜಲ ಭಾಷೆಯ ಹೋರಾಟಕ್ಕೆ ಸದಾ ಸಿದ್ಧರಾಗಿರುವಂತೆ ಕರೆ ನೀಡಿದರು.

ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷರಾಗಿ ನೇಮಕಗೊಂಡ ವೆಂಕಟೇಶ ನಾಯಕ ಹಾಗೂ ಇತರೆ ಪದಾಧಿಕಾರಿಗಳಿಗೆ ಸನ್ಮಾನಿಸಿ ಗೌರವಿಸುವ ಮೂಲಕ ನೇಮಕ ಆದೇಶ ಪತ್ರವನ್ನು ವಿತರಿಸಿದರು.ಈ ಸಂದರ್ಭದಲ್ಲಿ ಸೇನೆ ಜಿಲ್ಲಾ ಉಪಾಧ್ಯಕ್ಷ ಚಂದ್ರಶೇಖರ ನಾಯಕ,ಬೆಂಗಳೂರು ನಗರ ಜಿಲ್ಲಾಧ್ಯಕ್ಷರು ಯುವಘಟಕ,ರಮೇಶ ಪಡಕೋಟೆ ರಾಯಚೂರು ಜಿಲ್ಲಾಧ್ಯಕ್ಷರು,ಅಂಬರೀಶ ನಾಯಕ ಡೊಣ್ಣಿಗೇರ ಸೇರಿದಂತೆ ಅನೇಕರಿದ್ದರು.

ಪದಾಧಿಕಾರಿಗಳು: ವೆಂಕಟೇಶ ನಾಯಕ ಹವಾಲ್ದಾರ್ ಅಧ್ಯಕ್ಷ,ಡಿ.ರಾಮದೇವರು ನಾಯಕ ಪ್ರಧಾನ ಕಾರ್ಯದರ್ಶಿ ಹಾಗೂ ಬಸವರಾಜ ನಾಯಕ,ಬಸವರಾಜ ಕವಡಿಮಟ್ಟಿ,ದೇವರಾಜ ಅರಳಳ್ಳಿ,ಶಿವಪ್ಪಗೌಡ ಗೋಡಿಹಾಳ,ಪ್ರಭು ಅರಳಳ್ಳಿ,ಮಲ್ಲಿಕಾರ್ಜುನ ವಾರಿ ಸುರಪುರ, ಸೋಮರಾಯ ನಾಯಕ ಗೋಡಿಹಾಳ,ಪರಮಗೌಡ ಮಕಾಶಿ,ಬಸವರಾಜ ರುಕ್ಮಾಪುರ,ಅಂಬ್ರೇಶ ನಾಯಕ ದೇವತ್ಕಲ್,ಆನಂದ ಅರಳಳ್ಳಿ ಯವರನ್ನು ವಿವಿಧ ಪದಾಧಿಕಾರಿಗಳನ್ನಾಗಿ ನೇಮಕಗೊಳಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here