ಭೀಕರ ರಸ್ತೆ ಅಪಘಾತ ಓರ್ವ ಯುವಕ ಸ್ಥಳದಲ್ಲೇ ಸಾವು

0
126

ಕಲಬುರಗಿ: ಜೇವರ್ಗಿ ಪಟ್ಟಣದ ರಿಲಯನ್ಸ್ ಪೆಟ್ರೋಲ್ ಪಂಪ್ ಹತ್ತಿರ ಬೀದರ ಬಳ್ಳಾರಿ ರಾಜ್ಯ ಹೆದ್ದಾರಿ 50 ರ ಮೇಲೆ ಭೀಕರ ರಸ್ತೆ ಅಪಘಾತ ಸಂಭವಿಸಿ ಸ್ಥಳದಲ್ಲೆ ಓರ್ವ ಮೃತಪಟ್ಟ ಘಟನೆ ನಡೆದಿದೆ.

ಜೇವರ್ಗಿ ತಾಲ್ಲೂಕಿನ ಬಾಬು ಜಗಜೀವನ್ ರಾಮ ನಗರ ನಿವಾಸಿ ಆಕಾಶ ಮಾಹಾದೇವಪ್ಪ ನಾಕ್ಮನ ((25) ಎಂಬುವ ಯುವಕ ಮೃತಪಟ್ಟಿದ್ದಾನೆ.

Contact Your\'s Advertisement; 9902492681

ಕೊಳಕುರ ಕ್ರಾಸ್ ಕಡೆ ಆಟೋ ಹೊರಟಿತ್ತು ಕಲಬುರ್ಗಿ ಕಡೆಯಿಂದ ವೇಗವಾಗಿ ಬಂದ ಕ್ರಷರ್ ವಾಹನ ಮುಖಾ ಮುಖಿ ದಿಕ್ಕಿಯಾಗಿ ದಿಕ್ಕಿಯ ರಬಸಕ್ಕೆ ಆಟೋದ ಮುಂಬಾಗ ನುಜ್ಜು ಗುಜ್ಜಾಗಿ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಘಟನೆ ನಡೆದ ಸ್ಥಳಕ್ಕೆ ಜೇವರ್ಗಿ ಪೊಲೀಸ್ ಠಾಣೆ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿ ಮೃತ ಶವವನ್ನು ಆಂಬುಲೆನ್ಸ್ ಮೂಲಕ ಜೇವರ್ಗಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ.

ಮೃತ ಯುವಕನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here