ಬೃಹತ್ ಆರೋಗ್ಯ ತಪಾಸಣಾ ಶಿಬಿರ 27ಕ್ಕೆ: ಶಾಸಕ ರಾಜುಗೌಡ

0
23

ಸುರಪುರ: ಇದೆ 27 ರಂದು ಸುರಪುರ ಮತ್ತು ಹುಣಸಗಿ ತಾಲೂಕಿನ ಸಮಗ್ರ ಜನರ ಹಿತದೃಷ್ಟಿಯಿಂದ ಬೃಹತ್ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ರಾಜುಗೌಡ ತಿಳಿಸಿದರು.

ತಾಯಿ ತಿಮ್ಮಮ್ಮ ಮೆಮೊರೆಬಲ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಗರದ ರಾಜಾನಂದ ನಗರದಲ್ಲಿ ಹಮ್ಮಿಕೊಂಡಿರುವ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮ ಆಯೋಜನೆಯ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿ,ಯುನೈಟೆಡ್ ಆಸ್ಪತ್ರೆ ಕಲಬುರಗಿಯ ಎಲ್ಲಾ ವೈದ್ಯರು ಭಾಗವಹಿಸಲಿದ್ದು ಮೇಳದಲ್ಲಿ ಎಲ್ಲಾ ವಿಧದ ಕಾಯಿಲೆಗಳ ಪರೀಕ್ಷೆ,ಔಷಧಿ ವಿತರಣೆ ಅಗತ್ಯವಿದ್ದಲ್ಲಿ ಶಸ್ತ್ರ ಚಿಕಿತ್ಸೆಯನ್ನೂ ನಂತರದಲ್ಲಿ ಮಾಡಿಸಲಾಗುವುದು ಎಂದು ತಿಳಿಸಿದರು.

Contact Your\'s Advertisement; 9902492681

ಜೊತೆಗೆ ರಕ್ತ ದಾನ ಶಿಬಿರವು ನಡೆಯಲಿದೆ ಹಾಗೂ ಸಂಜೆ 7 ಗಂಟೆಯಿಂದ ಮೆಘಾ ಸ್ಯಾಂಡಲ್‍ವುಡ್ ಮ್ಯೂಸಿಕಲ್ ನೈಟ್ ಕಾರ್ಯಕ್ರಮ ನಡೆಯಲಿದೆ. ಚಿತ್ರನಟರಾದ ಲವ್ಲಿಸ್ಟಾರ್ ಪ್ರೇಮ್, ಶರಣ್ ಸೇರಿದಂತೆ ಗುರು ಶಿಷ್ಯರು ಚಿತ್ರ ತಂಡವೂ ಭಾಗವಹಿಸಲಿದೆ.ಜೊತೆಗೆ ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಅವರ ನೇತೃತ್ವದಲ್ಲಿ ರಸಮಂಜರಿ ಕಾರ್ಯಕ್ರಮವೂ ನಡೆಯಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಅಧ್ಯಕ್ಷರಾದ ರಾಜಾ ಹನುಮಪ್ಪ ನಾಯಕ (ತಾತಾ),ಡಿವೈಎಸ್ಪಿ ಮಂಜುನಾಥ ಟಿ,ಪಿಐ ಆನಂದ ವಾಘಮೊಡೆ, ಮುಖಂಡರಾದ ಬಸನಗೌಡ ಹಳ್ಳಿಕೋಟಿ,ಶಂಕರ ನಾಯಕ,ರಾಜಾ ರಂಗಪ್ಪ ನಾಯಕ,ಶ್ರೀನಿವಾಸ ನಾಯಕ ದರಬಾರಿ,ರಾಜಾ ಜೈರಾಮ ನಾಯಕ,ಅಂಬ್ರೇಶ ನಾಯಕ ಡೊಣ್ಣಿಗೇರ,ರಂಗನಗೌಡ ಪಾಟೀಲ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here