ಅಂಗನವಾಡಿ ನೌಕರರಿಂದ ಮುಂದುವರೆದ ಅಹೋರಾತ್ರಿ ಧರಣಿ

0
108

ಶಹಾಬಾದ:ನಾಲ್ಕು ತಿಂಗಳ ಬಾಕಿ ವೇತನ ಬಿಡುಗಡೆ ಮತ್ತು ವೇತನ ಹೆಚ್ಚಳವಾದ ಬಾಕಿ ಹಣ ಬಿಡುಗಡೆ, ಗ್ಯಾಸ್ ಸಿಲಿಂಡರ್ ಪೂರೈಕೆ, ತರಕಾರಿ ಬಿಲ್ 4 ದಿನದ ಒಳಗಾಗಿ ವೇತನ ಪಾವತಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು) ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಚೇರಿಯ ಮುಂಭಾಗದಲ್ಲಿ ಗುರುವಾರ ಅಹೋರಾತ್ರಿ ಧರಣಿ ಮುಂದುವರೆಯಿತು.

ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ರಾಜ್ಯಾಧ್ಯಕ್ಷೆ ಎಸ್.ವರಲಕ್ಷ್ಮಿ ಅಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಅಂಗನವಾಡಿ ಕಾರ್ಯಕರ್ತೆಯರು ಏನಾದರೂ ತಪ್ಪು ಮಾಡಿದರೇ ಮುಲಾಜಿಲ್ಲದೇ ಕ್ರಮಕೈಗೊಳ್ಳಬೇಕು.ಅಲ್ಲದೇ ಸೇವೆಯಿಂದ ತೆಗೆಯಬೇಕೆಂದು ಸರಕಾರ ಹೇಳುತ್ತದೆ.ಆದರೆ ಅಂಗವಾಡಿ ಕಾರ್ಯಕರ್ತೆಯರು ಕೆಲಸ ಮಾಡಿದ ಸಂಬಳವನ್ನು ನೀಡದೇ ಬಿಜೆಪಿ ಸರಕಾರ ಪುಗಸಟ್ಟೆ ದುಡಿಸಿಕೊಳ್ಳುತ್ತಿದೆ.

Contact Your\'s Advertisement; 9902492681

ಕೇಂದ್ರದಲ್ಲೂ ಹಾಗೂ ರಾಜ್ಯದಲ್ಲೂ ನಮ್ಮ ಡಬಲ್ ಇಂಜಿನ್ ಸರಕಾರವಿದೆ.ಇದರಿಂದ ಆಡಳಿ ಸುಲಭವಾಗಿ ಮಾಡಬಹುದೆಂದು ಹೇಳುತ್ತಿತ್ತು.ಆದರೆ ಇಂದು ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಸುಮಾರು 4 ತಿಂಗಳಿಂದ ವೇತನ ಜಮೆಯಾಗಿಲ್ಲ.ಕೋಳಿ ಮೊಟ್ಟೆಗೆ ಹಣ ನೀಡಬೇಕು.ಆದರೆ ಮೊಟ್ಟೆಯನ್ನು ಖರೀದಿಸಿ ಬಿಲ್ ಪಾವತಿ ಮಾಡಿ ಹಣ ನೀಡುತ್ತೆವೆ ಎಂದು ಸರಕಾರ ಹೇಳುತ್ತದೆ. ಗ್ಯಾಸ್ ಖರೀದಿಸಿದ ಹಣ ಜಮೆ ಮಾಡುತ್ತಿಲ್ಲ.ಇಂತಹ ಕೆಟ್ಟ ಸರಕಾರ ಹಿಂದೆಂದೂ ನೋಡಿಲ್ಲ. ನಿರಂತರವಾಗಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರು ಎಲ್ಲಿಲ್ಲದ ತೊಂದರೆ ಅನುಭವಿಸುತ್ತಿದ್ದಾರೆ.ಸಮಸ್ಯೆಗೆ ಪರಿಹಾರ ಒದಗಿಸುವಲ್ಲಿ ಅಧಿಕಾರಿಗಳು ಸಂಪರ್ಣ ಸೋತಿದ್ದಾರೆ.ಕೂಡಲೇ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು.ಇಲ್ಲದಿದ್ದರೇ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ರಾಜ್ಯ ಕಾರ್ಯಾಧ್ಯಕ್ಷೆ ಶಾಂತಾ ಘಂಟೆ, ಜಿಲ್ಲಾಧ್ಯಕ್ಷೆ ಗೌರಮ್ಮ ಪಾಟೀಲ, ಜನವಾದಿ ಮಹಿಳಾ ಸಂಘಟನೆ ರಾಜ್ಯುಪಾಧ್ಯಕ್ಷೆ ಕೆ.ನೀಲಾ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಮಲ್ಲಿಕಾರ್ಜುನ ಸಜ್ಜನ್, ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಫೆಡರೇಷನ್ ಜಿಲ್ಲಾ ಕಾರ್ಯದರ್ಶಿ ನಾಗಯ್ಯಾಸ್ವಾಮಿ ಮಾತನಾಡಿದರು.

ಕೆಪಿಆರ್‍ಎಸ್ ರಾಜ್ಯ ಜಂಟಿ ಕಾರ್ಯದರ್ಶಿ ಸಾಯಬಣ್ಣ ಗುಡುಬಾ, ಕಟ್ಟಡ ಕಾರ್ಮಿಕ ಸಂಘದ ಕಾರ್ಯದರ್ಶಿ ನಾಗಪ್ಪ ರಾಯಚೂರಕರ್, ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಗೌರಮ್ಮ ಪಾಟೀಲ, ಅಂಗನವಾಡಿ ನೌಕರರ ಸಂಘದ ತಾಲೂಕಾಧ್ಯಕ್ಷೆ ಸಾಬಮ್ಮ ಎಮ್.ಕಾಳಗಿ, ನಗರಾಧ್ಯಕ್ಷೆ ಮೈತ್ರಾ ತಳವಾರ, ಕಾರ್ಯದರ್ಶಿ ಶೇಖಮ್ಮ ಕುರಿ,ಕೆಪಿಆರ್‍ಎಸ್ ಅಧ್ಯಕ್ಷ ರಾಯಪ್ಪ ಹುರಮುಂಜಿ,ಬಾಲಮ್ಮ ವಾಡಿ, ಲಕ್ಷ್ಮಿ ಜಾಧವ, ಉಮಾ ವಾಡಿ,ಸುವರ್ಣ, ಅಂಬುಜಾ, ಶಾರದಾ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here