ಬೈರಿಮರಡಿ: ಜಯ ಕರ್ನಾಟಕ ರಕ್ಷಣಾ ಸೇನೆ ಗ್ರಾಮ ಶಾಖೆ ರಚನೆ

0
9

ಸುರಪುರ: ತಾಲೂಕಿನ ಬೈರಿಮರಡಿ ಗ್ರಾಮದಲ್ಲಿ ಜಯ ಕರ್ನಾಟಕ ರಕ್ಷಣಾ ಸೇನೆ ಗ್ರಾಮ ಶಾಖೆ ರಚನೆ ಮಾಡಲಾಯಿತು.ಸಂಘಟನೆಯ ತಾಲೂಕು ಅಧ್ಯಕ್ಷ ಮಲ್ಲಪ್ಪ ನಾಯಕ ಕಬಾಡಗೇರ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು,ಇಂದು ಬೈರಿಮರಡಿ ಗ್ರಾಮದ ಅನೇಕರು ಇಂದು ನಮ್ಮ ಜಯ ಕರ್ನಾಟಕ ರಕ್ಷಣಾ ಸೇನೆ ಸಂಘಟನೆಯನ್ನು ಸೇರಿ ಗ್ರಾಮ ಶಾಖೆ ರಚನೆ ಮಾಡಿಕೊಂಡು ಹೋರಾಟಕ್ಕೆ ಮುಂದಾಗಿರುವುದು ತುಂಬಾ ಸಂತೋಷದ ಸಂಗತಿಯಾಗಿದೆ,ಗ್ರಾಮದ ಸಮಸ್ಯೆಗಳ ಕುರಿತು ಧ್ವನಿ ಎತ್ತುವುದು ಹಾಗೂ ಸಂಘಟನೆಯ ಎಲ್ಲಾ ಹೋರಾಟಗಳಲ್ಲಿ ತಾವು ಭಾಗವಹಿಸುವ ಮೂಲಕ ನಾಡು ನುಡಿ ಸೇವೆಗೆ ಮುಂದಾಗುವಂತೆ ಕರೆ ನೀಡಿದರು.ಅಲ್ಲದೆ ಸಂಘಟನೆಯ ಯಾವುದೇ ತತ್ವ ಸಿದ್ಧಾಂತಗಳಿಗೆ ಧಕ್ಕೆ ಬರದಂತೆ ಸಂಘಟನೆಯನ್ನು ಬೆಳೆಸುವಂತೆ ಕಿವಿಮಾತು ಹೇಳಿದರು.

Contact Your\'s Advertisement; 9902492681

ಈ ಸಂಧರ್ಭದಲ್ಲಿ ಜಯ ಕರ್ನಾಟಕ ರಕ್ಷಣಾ ಸೇನೆ ಯಾದಗಿರಿ ಜಿಲ್ಲಾ ಕಾರ್ಯದರ್ಶಿ ಯಾದ ಶರಣು ಬೈರಿಮರಡಿ, ಮುಖಂಡರಾದ ರಾಜು ಧರಬಾರಿ, ಹೊನ್ನಪ್ಪ ಬೈರಿಮರಡಿ, ಶಿವರಾಜ ವಗ್ಗರ, ರಾಘು ಕಟ್ಟಿಮನಿ, ರಾಘು ಹೋಗಿಕೆರ, ರವಿ ನಾಯಕ ಬಿಚದಕೆರ,ತಿಪ್ಪಣ್ಣ ಖಾನಿಕೇರಿ,ರಾಮಚಂದ್ರ ದೇವರಗೊನಾಲ ಮತ್ತು ಇನ್ನಿತರರಿದ್ದರು.

ಗ್ರಾಮಶಾಖೆ ಪದಾಧಿಕಾರಿಗಳು: ಅಧ್ಯಕ್ಷರನ್ನಾಗಿ ರಾಜು ಹುಂಡೆಕಲ, ಗೌರವ ಅಧ್ಯಕ್ಷರನ್ನಾಗಿ ಸಿದ್ರಾಮಪ್ಪ ಅನಸುರ,,ಉಪಾಧ್ಯಕ್ಷರನ್ನಾಗಿ ಬಲಭೀಮ ಬನ್ನೆಟ್ಟಿ,ಕಾರ್ಯಾಧ್ಯಕ್ಷ ಮೈಲಾರೆಪ್ಪ ಯಾದವ, ಪ್ರಧಾನ ಕಾರ್ಯದರ್ಶಿ ವೆಂಕಟೇಶ ದೊರಿ, ಸಹ ಕಾರ್ಯದರ್ಶಿ ಮೈಲಾರಪ್ಪ ಯಾದವ, ಸಂಚಾಲಕ ಸಣ್ಣ ಭೀಮಣ್ಣ ಸಂಗಟಿ, ಜಂಟಿ ಕಾರ್ಯದರ್ಶಿ ವೆಂಕಟೇಶ ನಾಯ್ಕೊಡಿ, ಖಜಾಂಚಿ ಬಲಭೀಮ ಚಳ್ಳಿಗಿ ಮತ್ತಿತರರನ್ನು ಆಯ್ಕೆ ಮಾಡಿ ಆದೇಶ ಪತ್ರ ನೀಡಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here