ಸುರಪುರ: ನಗರದ ಕಾಂಗ್ರಸೆ ಕಚೇರಿ ಆವರಣದಲ್ಲಿ ಮಾಜಿ ಶಾಸಕರಾದ ರಾಜಾ ವೆಂಕಟಪ್ಪ ನಾಯಕರ ನೇತೃತ್ವದಲ್ಲಿ ಹೆಬ್ಬಾಳ(ಬಿ) ಗ್ರಾಮದ ಹಲವಾರು ಬಿಜೆಪಿ ಪಕ್ಷದ ಮುಖಂಡರು ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಮಾಜಿ ಶಾಸಕರು ಮಾತನಾಡಿ, ಪಕ್ಷವನ್ನು ತಳಮಟ್ಟದಿಂದ ಬಲಪಡಿಸುವದರ ಜೊತೆಗೆ ಕಾಂಗ್ರೆಸ್ ಬೆಂಬಲಿತ ಎಲ್ಲಾ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸಬೇಕೆಂದು ಹೇಳಿದರು.
ಆದಪ್ಪ ಸಾಹುಕಾರ, ಸುರೇಶ ಸಾಹುಕಾರ, ಮುಕ್ಕಣ್ಣ ಕೊಂಡನೋರ, ಸಿದ್ದು ಕುಂಬಾರ, ರಾಮಣ್ಣ ಬಾಗೊಡಿ, ಯಂಕೋಬ ಗುಂತಾ, ಪರಮಣ್ಣ ಪೂಜಾರಿ, ಮರೆಪ್ಪ ಬಾನಾಳ, ಜೆಟ್ಟೆಪ್ಪ ಪೂಜಾರಿ, ಶಾಂತಪ್ಪ ಪೂಜಾರಿ, ನಾನಿರೆಡ್ಡಿ, ಅಪ್ಸೋರೊಜ ಸೈಯದ ಸೇರ್ಪಡೆಯಾದರು
ಈ ಸಂದರ್ಭದಲ್ಲಿ ಮುಖಂಡರಾದ ವೆಂಕೋಬ ಸಾಹುಕಾರ ಕಾಂಗ್ರೆಸ್ ಹಿರಿಯ ಮುಖಂಡರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ನಿಂಗರಾಜ ಬಾಚಿಮಟ್ಟಿ, ಸಿದ್ದನಗೌಡ ಹಂದ್ರಾಳ, ಭೀಮರಾಯ ಮೂಲಿಮನಿ, ಶಾಂತಗೌಡ ಪಾಟೀಲ್, ಯುನುಸ್ ಸೈಯದ, ಸಾಹೇಬಗೌಡ ವಾಗಣಗೇರಿ, ಶರಬಯ್ಯ ಸ್ವಾಮಿ ತಳವರಗೇರಾ, ಸಿದ್ದು ಸಾಹುಕಾರ ವಾಗಣಗೇರಾ ಇನ್ನಿತರರು ಉಪಸ್ಥಿತರಿದ್ದವರು,