ಸುರಪುರ:ವಿದ್ಯಾರ್ಥಿ ನಿಲಯಕ್ಕೆ ಡಿಸಿಆರ್‍ಬಿ ತಂಡ ಭೇಟಿ

0
12

ಸುರಪುರ: ನಗರದ ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ನಡೆಯುತ್ತಿರುವ ಪದವಿ ಪೂರ್ವ ವಿದ್ಯಾರ್ಥಿಗಳ ವಸತಿ ನಿಲಯಕ್ಕೆ ಮಂಗಳವಾರ ಕಲಬುರ್ಗಿ ಡಿಸಿಆರ್‍ಬಿ ಅಧಿಕಾರಿಗಳ ತಂಡ ಭೇಟಿ ನೀಡಿತು. ಈ ಸಂದರ್ಭದಲ್ಲಿ ಡಿಸಿಆರ್‍ಬಿ ಡಿವೈಎಸ್ಪಿ ಡಿ.ಜಿ ರಾಜಣ್ಣ ಅವರು ವಸತಿ ನಿಲಯದಲ್ಲಿನ ಎಲ್ಲಾ ಕೋಣೆಗಳು ಹಾಗೂ ವ್ಯವಸ್ಥೆಯನ್ನು ಪರಿಶೀಲಿಸಿದರು ಅಲ್ಲದೆ ಮಕ್ಕಳೊಂದಿಗೆ ಸ್ವತಃ ತಾವೇ ಭೋಜನ ಸವಿದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಹಾಜರಿದ್ದ ಅನೇಕ ವಿದ್ಯಾರ್ಥಿಗಳು ವಸತಿ ನಿಲಯದಲ್ಲಿನ ಕೆಲ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದರು.ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಶೃತಿ ಎಸ್, ಡಿಸಿಆರ್‍ಬಿ ಪಿಎಸ್‍ಐ ಶರಣಪ್ಪ ಹವಲ್ದಾರ್,ಕಚೇರಿ ವ್ಯವಸ್ಥಾಪಕ ಚನ್ನಕೇಶವ ಸಾಣಕ್ಯಾನವರ್,ಎಫ್‍ಡಿಸಿ ಜಾಕೀರ ಹುಸೇನ,ಎಸ್‍ಡಿಸಿ ರಮೇಶ ಮುಂಡರಗಿ,ವಾರ್ಡನ್‍ಗಳಾದ ಶಿವುಗೌಡ ಬಿರಾದಾರ,ಎನ್.ಎಮ್ ಪೀರಗೋಳ,ಜೂ ವಾರ್ಡನ್ ಮಹಾದೇವಪ್ಪ ಬೊಮ್ಮನಹಳ್ಳಿ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here