ವಿರಾಟಪುರ ವಿರಾಗಿ ಸಿನಿಮಾ ಯಶಸ್ಸಿಗೆ ಸುರಪುರದಲ್ಲಿ ಶುಭ ಹಾರೈಕೆ

0
24

ಸುರಪುರ: ರಾಜ್ಯಾದ್ಯಂತ ಬಿಡುಗಡೆಗೊಂಡಿರುವ ಹಾನಗಲ್ಲ ಗುರು ಕುಮಾರ ಶಿವಯೋಗಿಗಳ ಜೀವನ ಚರಿತ್ರೆಯುಳ್ಳ ವಿರಾಟಪುರ ವಿರಾಗಿ ಚಲನಚಿತ್ರವು ಯಶಸ್ಸು ಕಾಣಲೆಂದು ಸುರಪುರದಲ್ಲಿ ಶುಭ ಹಾರೈಸಲಾಗಿದೆ.

ಸುರಪುರ ನಗರದ ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದ ಭವನದಲ್ಲಿ ದೇವಪುರ ಹಿರೇಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿರ ಸುರಪುರ ನಿಷ್ಠಿ ಕಡ್ಲೆಪ್ಪನವರ ವಿರಕ್ತ ಮಠದ ಶ್ರೀ ಪ್ರಭುಲಿಂಗ ಸ್ವಾಮೀಜಿಗಳ ನೇತೃತ್ವದಲ್ಲಿ ಅನೇಕ ಮುಖಂಡರು ಭಾಗವಹಿಸಿ ಚಲನಚಿತ್ರದ ಪೋಸ್ಟರ್ ಹಿಡಿದು ಚಿತ್ರ ಶತದಿನೋತ್ಸವ ಆಚರಿಸಲಿ ಎಂದು ಶುಭ ಹಾರೈಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಮುಖಂಡರಾದ ಬಸವರಾಜ ಬೂದಿಹಾಳ ವೀರೇಶ ನಿಷ್ಠಿ ದೇಶಮುಖ ಅಭಾವೀಲಿಂ ಮಹಾಸಭಾ ರಾಜ್ಯ ಯುವ ಘಟಕದ ಉಪಾಧ್ಯಕ್ಷ ಪ್ರಕಾಶ್ ಅಂಗಡಿ, ತಾಲೂಕು ಅಧ್ಯಕ್ಷ ಮಂಜುನಾಥ ಜಾಲಹಳ್ಳಿ,ಯುವ ಘಟಕದ ತಾಲೂಕು ಅಧ್ಯಕ್ಷ ಶಿವರಾಜ ಕಲಕೇರಿ,ನಗರಸಭೆ ಉಪಾಧ್ಯಕ್ಷ ಮಹೇಶ ಪಾಟೀಲ, ಹಿರಿಯ ಮುಖಂಡರಾದ ಜಿ.ಎಸ್ ಪಾಟೀಲ್,ಜಯಲಲಿತ ಪಾಟೀಲ್,ಸಿದ್ದಯ್ಯಸ್ವಾಮಿ ಕಡ್ಲೆಪ್ಪನವರಮಠ, ಜಗದೀಶ ಪಾಟೀಲ್, ರವಿಗೌಡ ಹೆಮನೂರ, ಚಂದ್ರಶೇಖರ ಮಡಿವಾಳ,ಸಿದ್ದನಗೌಡ ಹೆಬ್ಬಾಳ, ಮಂಜುನಾಥ ಹಿರೇಮಠ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here