ಜನಸ್ನೇಹಿ ಕಾನೂನು ಸುವ್ಯಸ್ಥೆಗೆ ಆದ್ಯತೆ: ನೂತನ ಕಮಿಷನರ್ ಚೇತನ ಆರ್. ಭರವಸೆ

0
26

ನಗರದ ಬೇರೆ ಬೇರೆ ಬಡಾವಣೆ ಮತ್ತು ರಸ್ತೆಗಳು ಬೇರೆ ಬೇರೆ ಪೊಲೀಸ್ ಠಾಣೆಗಳ ವ್ಯಾಪ್ತಿಗೆ ಬರುತ್ತವೆ. ಅಪಘಾತ ಅಥವಾ ತುರ್ತು ಸಂದರ್ಭಗಳಲ್ಲಿ ಯಾವ ಠಾಣೆಯನ್ನು ಸಂಪರ್ಕಿಸಬೇಕು ಎಂಬ ಗೊಂದಲ ಸಾರ್ವಜನಿಕರನ್ನು ಕಾಡುತ್ತದೆ. ಹೀಗಾಗಿ ಇಷ್ಟರಲ್ಲೇ ಪೊಲೀಸ್ ಠಾಣೆಗಳ ಸರಹದ್ದು ಖಚಿತಪಡಿಸುವ ಬೋರ್ಡ್‍ಗಳನ್ನು ನಗರದ ಎಲ್ಲೆಡೆ ಅಳವಡಿಸಲಾಗುವುದು. -ಚೇತನ್ ಆರ್, ಕಲಬುರಗಿ ನಗರ ಪೊಲೀಸ್ ಕಮಿಷನರ್.

ಕಲಬುರಗಿ: ಪೊಲೀಸ್ ಆಯುಕ್ತಾಲಯದ ವ್ಯಪ್ತಿಯಲ್ಲಿ ಕನೂನು ಸುವ್ಯವಸ್ಥೆ ಪಾಲನೆಗೆ ಮೊದಲ ಆದ್ಯತೆ ನೀಡಲಗುತ್ತಿದ್ದು, ಮಕ್ಕಳು ಮತ್ತು ಹಿರಿಯ ನಾಗರಿಕರ ರಕ್ಷಣೆಗೆ ಜನಶ್ನೇಹಿ ಪೊಲೀಸ್ ವ್ಯವಸ್ಥೆಗಾಗಿ ಸಹಾಯವಾಣಿ 112 ಸಕ್ರಿಯಗೊಳಿಸಲಾಗುವುದು ಎಂದು ನೂತನ ಪೊಲೀಸ್ ಕಮಿಷನರ್ ಚೇತನ ಆರ್. ತಿಳಿಸಿದರು.

Contact Your\'s Advertisement; 9902492681

ಇಲ್ಲಿನ ಪೊಲೀಸ್ ಕಮಿಷನರ್ ಕಚೇರಿಯ ಸಭಾಂಗಣದಲ್ಲಿ ಶನಿವಾರ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದುರ್ಬಲ, ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳಿಗೆ ಕಡಿವಾಣ ಹಾಕುವುದಕ್ದಕಾಗಿ ಇಲಾಖೆಯನ್ನು ಸನ್ನದ್ದುಗೊಳಿಸುವುದಾಗಿ ಅವರು ಹೇಳಿದರು.

ಆಯುಕ್ತಾಲಯದ ವ್ಯಾಪ್ತಿಯಲ್ಲಿ ನೈಟ್ ಬೀಟ್ ವ್ಯವಸ್ಥೆ ಮತ್ತಷ್ಟು ಬಲಪಡಿಸಲಾಗುವುದು ಅದರಲ್ಲೂ ಮುಖ್ಯವಾಗಿ ವರ್ತುಲ ರಸ್ತೆ ಮತ್ತು ಹೆಚ್ಚು ಜನಸಂಚಾರ ಇಲ್ಲದ ಪ್ರದೇಶಗಳಲ್ಲಿ ಅಪರಾಧ ಕೃತ್ಯಗಳಿಗೆ ಆಸ್ಪದವಿಲ್ಲದಂತೆ ನೈಟ್ ಬೀಟ್ ಸಕ್ರಿಯಗೊಳಿಸಲಾಗುವುದು ಎಂದರು.

ಬೆಳಗ್ಗೆ 9ರಿಂದ 11 ಮತ್ತು ಸಂಜೆ 5ರಿಂದ 7 ಗಂಟೆಯವರೆಗೆ ನಗರದಲ್ಲಿ ವಾಹನ ದಟ್ಟಣೆ ಹೆಚ್ಚಿರುತ್ತದೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಸಂಚಾರ ವ್ಯವಸ್ಥೆ ಸುಧಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಅತ್ಯಧಿಕ ಭಾರದ ಮರಳು ಗಾಡಿಗಳು ಓಡಾಡುವುದರಿಂದ ರಸ್ತೆ ಹದಗೆಡುತ್ತಿವೆ ಎಂಬ ಮಾಧ್ಯನದವರ ಸಲಹೆ ಮೇಋಎಗೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.

ಪೊಲೀಸ್ ಇಲಾಖೆಯ ಸಿಬ್ಬಂದಿ ಸಮಾಜಘಾತುಕ ಶಕ್ತಿಗಳೊಂದಿಗೆ ಶಾಮೀಲಾಗಿರುವುದು ಕಂಡು ಬಂದರೆ ಅಂಥವರ ವಿರುದ್ಧ ಶುಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಗಡಿಪಾರು ಪ್ರಕರಣಕ್ಕೆ ಸಂಭಂಧಿಸಿದಂತೆ ದಾಖಲೆಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರಿಸಿದರು. ಡಿಸಿಪಿ ಅಡ್ಡೂರ್ ಶ್ರೀನಿವಾಸಲು ಇದ್ದರು.

ಪಾರ್ಕಿಂಗ್ ವ್ಯವಸ್ಥೆ ಆಟೋ ಚಾಲಕರೊಂದಿಗೆ ಸಭೆ: ಕಲಬುರಗಿ ನಗರದಲ್ಲಿ ಆಟೋ ಚಾಲಕರು ಎಲ್ಲಂದರಲ್ಲಿ ಆಟೋರಿಕ್ಷಾ ನಿಲ್ಲಿಸುತ್ತಾರೆ. ಇದರಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂಬ ದೂರುಗಳು ಸಾಕಷ್ಟು ಬಂದಿವೆ. ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಅಧಿಕೃತ ಪಾರ್ಕಿಂಗ್ ಸ್ಥಳದಲ್ಲಿಯೇ ಪಾರ್ಕ್ ಮಡುವಂತೆ ಕ್ರಮ ಕೈಗೊಳ್ಳಲಾಗುವುದು. ಇದಕ್ಕಾಗಿ ಆಟೋ ಚಾಲಕರ ಸಭೆ ಕರೆದು ಅವರೊಂದಿಗೆ ಚರ್ಚಿಸಿ ಅಗತ್ಯ ಸೂಚನೆಗಳನ್ನು ನೀಡಲಾಗುವುದು ಎಂದು ಕಮಿಷನರ್ ಚೇತನ್ ತಿಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here